ದಮ್ಮಾಮ್: ಸೆ.23. ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ವೃತ್ತಿಯಲ್ಲಿದ್ದ ಮೂಲತಃ ಬಿಹಾರದ ನಿವಾಸಿ ಲಾಲ್ ಮೋಹನ್ ಶಾ ಎಂಬವರು ಕಳೆದ ಏಳು ವರ್ಷಗಳಿಂದ ಸರಿಯಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೆಸಿಎಫ್ ದಮ್ಮಾಮ್ ಝೋನ್ ಸಾಂತ್ವಾನ ಇಲಾಖೆಯ ಅಧ್ಯಕ್ಷ ಬಾಷ ಗಂಗಾವಳಿ ಹಾಗೂ ಕನ್ವಿನರ್ ಇಸ್ಹಾಕ್ ಸಿ.ಐ.ಫಜೀರ್ ಸಂಕಷ್ಟದಲ್ಲಿದ್ದ ಲಾಲ್ ಮೋಹನ್ ಶಾ ಅವರನ್ನು ಸಂಪರ್ಕಿಸಿ ಸಂಘಟನೆಯಿಂದಾಗುವ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ಕೊಟ್ಟು ಧೈರ್ಯ ತುಂಬಿದ್ದರು.
ಅದರಂತೆ, ಊರಿಗೆ ತೆರಳಲು ಬೇಕಾದ ಎಲ್ಲಾ ಕಾನೂನು ಪತ್ರಗಳನ್ನು ಸರಿಪಡಿಸಿ
ಸಂಘಟನೆಯಿಂದ ಆರ್ಥಿಕ ನೆರವು ನೀಡಿ, ಇಂದು ದಮ್ಮಾಮ್ ವಿಮಾನ ನಿಲ್ದಾಣ ಮೂಲಕ ತವರಿಗೆ ಕಳುಹಿಸಿಕೊಡಲಾಯಿತು.
ಕೆಸಿಎಫ್ ನ ಸಮಾಜಮುಖಿ ಸೇವೆಗೆ ಶುಭ ಹಾರೈಸಿದ ಲಾಲ್ ಮೋಹನ್ ಶಾ ದಮ್ಮಮ್ ವಿಮಾನ ನಿಲ್ದಾಣದಲ್ಲಿ ಬಾಷ ಗಂಗಾವಳಿಯನ್ನು ಆಲಿಂಗಿಸಿ ತನ್ನ ಪಯಣವನ್ನು ಆರಂಬಿಸಿದರು.
















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ