ಮಂಗಳೂರಿಗೆ: ಇತಿಹಾಸ ಪ್ರಸಿದ್ಧ ದಾರುಲ್ ಉಲೂಮ್ ವಿದ್ಯಾ ಸಂಸ್ಥೆ ಹಝ್ರತ್ ಮಕಾನ್ ವೆಲ್ಲೂರು ಇದರ ಪ್ರಿನ್ಸಿಪಾಲ್ ಶೈಖುಲ್ ಹದೀಸ್ ಕೆ.ಸಿ ಅಬೂಬಕರ್ ಖಾಸಿಮಿ ಉಸ್ತಾದ್ ಡಿಸೆಂಬರ್ 27 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಡಿ. 28 ರಂದು ತಾಜುಲ್ ಫುಖಹಾ ಬೇಕಲ್ ಉಸ್ತಾದರ ಮಖ್ಬರ ಸಮೀಪ ನಡೆಯುವ ಬಂಟ್ವಾಳ ತಾಲೂಕು ಲತ್ವೀಫಿ ಸಂಗಮ ಮತ್ತು ಬೇಕಲ್ ಉಸ್ತಾದ್ ಅನುಸ್ಮರಣಾ ಸಮಾವೇಶದ ನೇತೃತ್ವ ವಹಿಸಲಿರುವರು.
ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಡಿ. 30 ರಂದು ಉಪ್ಪಿನಂಗಡಿ ಮಠ ನೂರುಲ್ ಉಲಮಾ ಫೌಂಡೇಶನ್ ನಲ್ಲಿ ನಡೆಯಲಿರುವ ಬೆಳ್ತಂಗಡಿ, ಪುತ್ತೂರು, ಕಡಬ ತಾಲೂಕು ಮಟ್ಟದ ಲತ್ವೀಫಿ ಸಂಗಮ ಮತ್ತು ವೆಲ್ಲೂರು ಲತ್ವೀಫಿಯ್ಯಾ ಸಂಸ್ಥೆಯ ಚಾನ್ಸಲರ್ ಆಗಿದ್ದ ಹಝ್ರತ್ ಸಯ್ಯಿದ್ ಉಸ್ಮಾನ್ ಖಾದಿರೀ, ಸಯ್ಯಿದ್ ಹಿಲಾಲ್ ಹಝ್ರತ್ ಹಾಗೂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣಾ ಸಮಾವೇಶದ ನೇತೃತ್ವ ವಹಿಸಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಎಲ್ಲಾ ಲತ್ವೀಫಿ ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅಬೂಬಕರ್ ಲತ್ವೀಫಿ ಬೇಂಗಿಲ ಪ್ರಕಟಣೆಯಲ್ಲಿ ತಿಳಿಸಿದರು.