ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ರವರು ಇಂದು ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರ ನಿಧನಕ್ಕೆ ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ಹಾಗು ಕಾರ್ಯದರ್ಶಿ ಅಲ್ ಹಜ್ ಫೈರೋಜ್ ಅಹಮದ್ ರಜ್ವೀ ರವರು ಅತೀವ ಸಂತಾಪ ಸೂಚಿಸಿದ್ದಾರೆ.
ಉಸ್ತಾದ್ ರವರು ಅಹಲೆ ಸುನ್ನತ್ ವಲ್ ಜಮಾತ್ ಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಸತತವಾಗಿ ಹಲವಾರು ವರ್ಷಗಳಿಂದ ವಿವಿಧ ಸುನ್ನಿ ಸಂಘ ಸಂಸ್ಥೆಗಳ ಮುಖಂಡರಾಗಿ ಕಾರ್ಯ ನಿರ್ವಹಿಸಿ ಸೇವೆ ಸಲ್ಲಿಸಿದರು. ಇವರ ಮರಣದಿಂದ ಸುನ್ನತ್ ಜಮಾತ್ ಗೆ ತುಂಬಲಾರದ ನಷ್ಟ ಉಂಟಾಗಿದೆ. ಮರ್ಹುಂ ಉಸ್ತಾದರ ಸೇವೆಯು ಸದಾ ನೆನಪಸಿಕೊಳ್ಳುವ ಜೊತೆಗೆ ಅಲ್ಲಾಹನು ಉಸ್ತಾದರ ಸೇವೆಯ ಕಾಣಿಕೆಯಾಗಿ ಸ್ವೀಕರಿಸಿ ಜನ್ನತುಲ್ ಫೀರ್ದೌಸ್ ಕರುಣಿಸಲಿ.
ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಮತ್ತು ಅಪಾರ ಕಾರ್ಯಕರ್ತರು ಆಶಿಸುತ್ತಾರೆ ಅಲ್ಲಾಹನು ಉಸ್ತಾದರ ಕುಟುಂಬ ವರ್ಗದವರಿಗೆ ನೆಮ್ಮದಿಯನ್ನು ಕರುಣಿಸಲಿ ಎಂದು ಕಾರ್ಯದರ್ಶಿ ಅಲ್ ಹಜ್ ಫೈರೋಜ್ ಅಹಮದ್ ರಜ್ವೀ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.