ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಸುನ್ನಿ ಸಂಸ್ಥೆ ಜಾಮಿಯಾ ಕಂಝುಲ್ ಇಮಾನ್ ನಲ್ಲಿ 72 ನೇ ಗಣರಾಜ್ಯೋತ್ಸವ ಆಚರಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ದ್ವಜರೋಹಣವನ್ನು ನೆರವೇರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಹೆಚ್.ಹೆಚ್. ದೇವರಾಜ್ ರವರು ಮುಖ್ಯ ಭಾಷಣಕರರಾಗಿ ಮಾತನಾಡಿ ಈ ದಿನದ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ದೆಹಲಿಯಲ್ಲಿ ನಡೆಯುತ್ತಿರುವ ಸುಮಾರು ಒಂದು ಕೋಟಿ ಇಪ್ಪತೈದು ಲಕ್ಷ ರೈತರು ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಅವಶ್ಯಕತೆ ಮುಖ್ಯವಾಗಿದೆ ಹಾಗೂ ದೇಶದ ರೈತರಿಗೆ ನಾವು ನೈತಿಕ ಶಕ್ತಿಯನ್ನು ತುಂಬುವ ಕೆಲಸ ಮಾಡುವ ಮೂಲಕ ರೈತರ ಚಳುವಳಿಗೆ ಯಶಸ್ವಿ ಪ್ರದರ್ಶನ ನೀಡಬೇಕಾಗಿ ಕರೆ ನೀಡಿದರು ಮತ್ತು ಜಿಲ್ಲಾ ಟಿಪ್ಪು ಸುಲ್ತಾನ್ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಂಶಿದ್ ಖಾನ್ ರವರು ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ವಿವರಿಸಿದರು.
ಈ ಸಮಾರಂಭದಲ್ಲಿ ಮೌಲಾನ ಅಬ್ದುಲ್ ಘನಿ, ಮೌಲಾನ ಜುಲ್ಫಿಕರ್, ಮೌಲಾನ ಇರ್ಷಾದ್ ರಜಾ, ಚಿಕ್ಕಮಗಳೂರು ಜಿಲ್ಲಾ ಖಾಝಿ ಮುಫ್ತಿ ಅನ್ವರ್ ಹುಸೈನ್, ಸಂಸ್ಥೆಯ ಕೋಶಾಧಿಕಾರಿ ಅಖ್ತರ್ ಹುಸೈನ್, ಆರಿಫ್ ಅಲಿ ಖಾನ್ ರಜ್ವಿ ವಾಸೀಂ ಅಹಮದ್ ಅಂಜುಮನ್ ಏ ಇಸ್ಲಾಮಿ ಮುಖ್ಯಸ್ಥ ತನ್ವೀರ್ ಅಹಮದ್ ಹಾಗು ಇನ್ನಿತರ ವಿವಿಧ ಸುನ್ನಿ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು
ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಚಿಕ್ಕಮಗಳೂರು ಸಲಾಂ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
ಚಿಕ್ಕಮಗಳೂರು: ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಚಿಕ್ಕಮಗಳೂರು: ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಸಮಾರಂಭ
ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ- ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
ಪ್ರವಾದಿ ನಿಂದನೆ- ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಚಿಕ್ಕಮಗಳೂರು ಮುಸ್ಲಿಂ ಜಮಾಅತ್ ಒತ್ತಾಯ
ಬಜರಂಗದಳ ಪುಂಡಾಟಿಕೆ : ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ
ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಗಣರಾಜ್ಯೋತ್ಸವ
ಚಿಕ್ಕಮಗಳೂರು ನಗರ ಸಭೆ ಚುನಾವಣೆ: ಮೊದಲ ಹಂತದ SDPI ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಚಿಕ್ಕಮಗಳೂರು: ಜಾಮಿಯಾ ಕಂಜುಲ್ ಇಮಾನ್ ನಿಂದ ಸ್ವಾತಂತ್ರ್ಯ ದಿನಾಚರಣೆ
ರಾಜ್ಯದ ಮುಸ್ಲಿಮರ ರಾಜಕೀಯ ಅವಸ್ಥೆ ಶೋಚನೀಯವಾಗಿದೆ- ಶಾಫಿ ಸಅದಿ