janadhvani

Kannada Online News Paper

ಎಸ್ಸೆಸ್ಸೆಫ್ ಚೆನ್ನಾವರ ಶಾಖೆ ಸ್ಥಾಪಕ ದಿನಾಚರಣೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಇದರ ಸ್ಥಾಪಕ ದಿನ ಸೆ 19 . ರಾಜ್ಯ ಸಮಿತಿಯ ಸುತ್ತೋಲೆಯಂತೆ ಚೆನ್ನಾವರ ಶಾಖಾ ವತಿಯಿಂದ ಧ್ವಜ ದಿನವನ್ನು ಸ್ಥಾಪಕಾಧ್ಯಕ್ಷರೂ, ಚೆನ್ನಾವರ ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಮ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಮಾಅತ್ ಕೋಶಾಧಿಕಾರಿ ಸಿಪಿ ಮುಹಮ್ಮದ್ ಹಾಜಿ ಧ್ವಜಾರೋಹಣಗೈದರು.
ನಸೀರ್ ನಿಝಾಮಿರವರು ಅಗಲಿದವರನ್ನನುಸ್ಮರಿಸುತ್ತಾ ಪ್ರಾರ್ಥನೆಗೈದರು.

ಎಸ್ ವೈ ಎಸ್ ಚೆನ್ನಾವರ ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉದ್ಘಾಟಿಸಿದರು.
ಕೆಸಿಎಫ್ ನಾಯಕ ಯೂಸುಫ್ ಹಾಜಿ ರವರು ಸಂದೇಶ ಭಾಷಣ ನಡೆಸಿದರು,
ಎಸ್ ವೈ ಎಸ್ ಕುಂಬ್ರ ಸೆಂಟರ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ , ಪ್ರ.ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ, ಮಾಜಿ ಅಧ್ಯಕ್ಷ ಯಹ್ಯಾ ಖಾನ್ ಮುಸ್ಲಿಯಾರ್ ರವರು ಶುಭ ಹಾರೈಕೆಯ ಮಾತುಗಳನ್ನಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಅಬ್ದುರ್ರಹ್ಮಾನ್ ಬಿ , ಪುತ್ತುಂಞಿ ಹಾಜಿ ಬಾಯಂಬಾಡಿ, ಮುತ್ತಲಿಬ್ ಹಾಜಿ (ಕೆಸಿಎಫ್), ಎಸ್ ವೈಎಸ್ ಇಸಾಬಾ ಅಮೀರ್ ಅಬ್ಬಾಸ್.ಎನ್, ಅಬ್ದುರ್ರಹ್ಮಾನ್ ಮುಕ್ಕೂರು, ಮುಹಮ್ಮದ್ ಕೆ, ಅಹ್ಮದ್ ಕೆ, ನಾಸಿರ್ ಎಪಿ ಮೊದಲಾದವರು ಉಪಸ್ಥಿತರಿದ್ದರು. ಅಮೀನ್ ಸಅದಿ ರವರು ಸ್ವಾಗತಿಸಿ ಎಸ್ಸೆಸ್ಸೆಫ್ ಉಪಾದ್ಯಕ್ಷ ನಿಝಾರ್ ಮುಸ್ಲಿಯಾರ್ ವಂದಿಸಿದರು.

error: Content is protected !! Not allowed copy content from janadhvani.com