janadhvani

Kannada Online News Paper

ಎಸ್.ಎಸ್.ಎಫ್ ತಿಂಗಳಾಡಿ ಶಾಖೆಯ ವತಿಯಿಂದ ಧ್ವಜ ದಿನ ಆಚರಣೆ

SSF ತಿಂಗಳಾಡಿ ಶಾಖೆಯ ವತಿಯಿಂದ ದರ್ಬೆ ಮಸೀದಿ ಮುಂಭಾಗದಲ್ಲಿ ಧ್ವಜ ದಿನವನ್ನು ಆಚರಿಸಲಾಯಿತು.ಪ್ರಸ್ತುತ ಕಾರ್ಯಕ್ರಮದ ದ್ವಜಾರೋಹಣವನ್ನು ಎಸ್ ವೈ ಎಸ್ ಅಧ್ಯಕ್ಷರಾದ ಮುಹಮ್ಮದ್ ಮದನಿ ನೆರವೇರಿಸಿದರು.

ಬಳಿಕ ಅಗಲಿದ ಸುನ್ನೀ ನೇತಾರರಿಗೆ ಹಾಗೂ ಕಾರ್ಯಕರ್ತರಿಗೆ ದುಆ ಮಾಡಲಾಯಿತು. ಹಮೀದ್ ಮದನಿ ಯವರು ದುಆ ನೇತೃತ್ವ ವಹಿಸಿದ್ದರು. SSF ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ಅವರು ಧ್ವಜ ದಿನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ KCF ನಾಯಕರಾದ ಮುಹಮ್ಮದ್ ಮುಸ್ಲಿಯಾರ್ ಅಂಙನ್ತಡ್ಕ , ಅಝೀಝ್ ದರ್ಬೆ, ಆಸಿಫ್ ಮನ್ನಾಫ್ , SYS ನಾಯಕರಾದ ಉಮರ್ ಮುಸ್ಲಿಯಾರ್, ಯೂಸುಫ್ ದರ್ಬೆ, ಅಶ್ರಫ್ ದರ್ಬೆ, SSF ಶಾಖಾ ಕಾರ್ಯಕರ್ತರಾದ ಹಸೈನಾರ್ ದರ್ಬೆ, ರವೂಫ್ ಮನ್ನಾಫ್ , ನೌಶಾದ್ , ಸತ್ತಾರ್, ಆಶಿಕ್, ಹರ್ಷದ್,ಶಿಹಾಬುದ್ದೀನ್ಓಲೆಮುಂಡೋವು, ತೌಶೀಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು. ಶಾಖಾ ಕಾರ್ಯದರ್ಶಿ ಸಹದ್ ತಿಂಗಳಾಡಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com