janadhvani

Kannada Online News Paper

ಎಸ್ಸೆಸ್ಸೆಫ್ ಧ್ವಜ ದಿನ : ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆಪ್ಟಂಬರ್ 19ರಂದು ನಗರ ಪಂಚಾಯತ್ ಪೌರ ಸಮ್ಮೇಳನ ಸಭಾಂಗಣದಲ್ಲಿ ಜರಗಿತು.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ನ ವಿವಿಧ ಕ್ಷೇತ್ರಗಳ ಕಾರ್ಯಾಚರಣೆಗಳನ್ನು ಹಾಗೂ ಪೌರ ಕಾರ್ಮಿಕ ದಿನದಂದು ನಡೆಸಿದ ಶುಚಿತ್ವ ಅಭಿಯಾನಕ್ಕೆ ಎಸ್ಸೆಸ್ಸೆಫ್ ನೀಡಿದ ಸಾಥ್ ನ್ನು ನೆನಪಿಸಿ ಅವರು ಶ್ಲಾಘಿಸಿದರು. ಸುಳ್ಯ ನಗರ ಪಂಚಾಯತ್ ಕಂದಾಯ ನಿರೀಕ್ಷಕ ಧನಂಜಯ ಶುಭ ಹಾರೈಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆ ವಹಿಸಿದರು.

ನಗರ ಪಂಚಾಯತ್ ಪೌರ ಕಾರ್ಮಿಕರಿಗೆ ಭೋಜನಾ ವ್ಯವಸ್ಥೆ ಮಾಡಲಾಯಿತು. ನಗರ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಳ್ಯ ಡಿವಿಷನ್ ಸಮಿತಿ ಸದಸ್ಯರಾದ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಕಬೀರ್ ಜಟ್ಟಿಪಳ್ಳ, ನೌಶಾದ್ ಕೆರೆಮೂಲೆ, ಶಮೀರ್ ಡಿ.ಎಚ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com