ನೆಲ್ಯಾಡಿ: ಕೊಕ್ಕಡ ನೆಲ್ಯಾಡಿ ಪುತ್ಯೆ ರಸ್ತೆ ಪುತ್ಯೆ ಸೇತುವೆಯ ಮೇಲೆ ಹಾಗು ಇಕ್ಕಲುಗಳಲ್ಲಿ ಕೆಸರು ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಮನಗಂಡು ಎಸ್ ಎಸ್ ಎಫ್ ಕೊಕ್ಕಡ ಶಾಖೆ ಕಾರ್ಯಕರ್ತರು ಶ್ರಮದಾನ ನಡೆಸಿದರು.
ಕೊಕ್ಕಡ ಎಸ್ ಎಸ್ ಎಫ್ ಅಧ್ಯಕ್ಷರಾದ ಕಲಂದರ್ ಎಂ ಎಚ್ ಕಲಂದರ್ ರವರ ಸಂಪೂರ್ಣ ಸಹಕಾರದಲ್ಲಿ ಕಾರ್ಯಕರ್ತರಾದ ಬಿ ಕೆ ಮಸ್ಕತ್ ಅಮ್ಮಿ, ಕೊಕ್ಕಡ ಸಿದ್ದಿಕ್ ಅಡೈ, ಸಿದ್ದಿಕ್ ಪಟ್ಟೂರು, ನೌಶಾದ್ ಪಟ್ಟೂರು, ನಿಯಾಝ್ ಪಟ್ಟೂರು, ಝಕರಿಯಾ ಅನ್ಸಿಫ್, ಶಫ್ವಾನ್, ಆಶಿಕ್, ನಿಝಾಮ್, ಕೆ ಎಂ ಸುಹೈಲ್, ರಝಾಕ್, ನಿಯಾಝ್, ಆರಿಫ್, ಆಶಿಫ್, ನಿಯಾಝ್, ಇಸ್ಮಾಯಿಲ್, ನೌಮಾನ್ ಕೊಕ್ಕಡ ಮುಂತಾದವರು ಭಾಗವಹಿಸಿದ್ದರು.
ಇವರೊಂದಿಗೆ ಆಲ್ವಿನ್ ಪಿಂಟೋ ಜತೆಗೂಡಿ ಸಹಕರಿಸಿದರು. ನಂತರ ಕೊಕ್ಕಡ ಬಸ್ ತಂಗುದಾಣ ಹಾಗು ಅದರ ಆಸುಪಾಸನ್ನು ಸ್ವಚ್ಛಗೊಳಿಸಲಾಯಿತು.