ಎಸ್ಸೆಸ್ಸೆಫ್ ಬಜಾಲ್ ಶಾಖೆ ವತಿಯಿಂದ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಬಜಾಲ್ ನಂತೂರ್ ಸುನ್ನಿ ಸೆಂಟರ್ ಕಛೇರಿಯಲ್ಲಿ ಶಾಖಾ ಅಧ್ಯಕ್ಷರಾದ ಆರೀಸ್ ಶಾಂತಿನಗರ ಅಧ್ಯಕ್ಷತೆಯಲ್ಲಿ ಜರುಗಿತು.
ಬದ್ರಿಯಾ ಜುಮಾ ಮಸೀದಿ ಇದರ ಖತೀಬ್ ಅಬ್ದುಲ್ ಖಾದರ್ ಮದನಿಯವರು ದುವಾರ್ಶಿವಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಕ್ಟರ್ ಅಧ್ಯಕ್ಷ ಶಾಫಿ ಮಿಸ್ಬಾಹಿ ಬಜಾಲ್ ಸ್ವಾಗತಿಸಿದರು. ಮ.ನ.ಪಾ ಸದಸ್ಯರಾದ ಅಶ್ರಪ್ ಬಜಾಲ್, ಎಸ್ ವೈ ಎಸ್ ಅಧ್ಯಕ್ಷ ಹನೀಫ್ ಕೆಳಗಿನ ಮನೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ. ಬಿಜೆಎಂ ಮಸೀದಿ ಕಾರ್ಯದರ್ಶಿ ಹಮೀದ್ ಪೈಸಲ್ ನಗರ, ಕೆಸಿಎಫ್ ನಾಯಕರಾದ ನೌಫಲ್ ಬಜಾಲ್, ಸೆಕ್ಟರ್ ನಾಯಕರಾದ ಮನ್ಸೂರ್ ಬಜಾಲ್, ನಾಸೀರ್ ಪಾಲಿಳಿ, ಹಕೀಲ್ ಹಸನ್,ನೌಶೀರ್ ಬಜಾಲ್ ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸರ್ವರಿಗೂ ಧನ್ಯವಾದ ಸಲ್ಲಿಸಿದರು.ಊರಿನ ಸರ್ವಧರ್ಮದ ಸುಮಾರು 400 ರಷ್ಟು ಜನರು ಕಾರ್ಯಕ್ರಮದ ಪ್ರಯೋಜನ ಪಡೆದರು.