janadhvani

Kannada Online News Paper

ಪೇರಿಮಾರ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ

ಮಸ್ಜಿದುಳ್ ಖಿಳರ್ ಹಾಗೂ ದಾರುಲ್ ಉಲೂಂ ಮದರಸ ಪೇರಿಮಾರ್ ಮತ್ತು SYS & SSF ಪೇರಿಮಾರ್ ಶಾಖೆ ವತಿಯಿಂದ 74 ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವು ಮಸ್ಜಿದುಳ್ ಖಿಳರ್ ವಠಾರದಲ್ಲಿ ನಡೆಯಿತು.

ಜಮಾಅತ್ ಅಧ್ಯಕ್ಷ ಶಾಫಿಯಾಕ ಧ್ವಜಾರೋಹಣ ನೆರವೇರಿಸಿ ಸ್ಥಳೀಯ ಖತೀಬ್ ರಫೀಕ್ ಸ’ಅದಿ ಅಲ್ ಅಫ್ಳಲಿ ಹುತಾತ್ಮರ ಅನುಸ್ಮರಣೆ ಹಾಗೂ ಆಝಾದಿ ಸಂದೇಶವನ್ನು ಸಾರಿದರು.

ಸಂದರ್ಭದಲ್ಲಿ ಮಸ್ಜಿದುಳ್ ಖಿಳರ್ ಹಾಗೂ ದಾರುಲ್ ಉಲೂಂ ಮದರಸ ಮುಅಲ್ಲಿಮರಾದ ಮುಹಮ್ಮದ್ ನಿಝಾಮಿ, ಅಬೂಬಕರ್ ಸಿದ್ದೀಕ್ ಲತೀಫಿ, ನವಾಝ್ ಝೈನಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಳೂಲ್, ಕೋಶಾಧಿಕಾರಿ ಹುಸೈನ್ ಬಿ,
ಶಾಖಾ ಪ್ರಧಾನ ಕಾರ್ಯದರ್ಶಿ ರಹೀಂ ಬಿ.ಆರ್ ಉಪಾಧ್ಯಕ್ಷ ಅಮೀನ್ ಮಾಲಿಕ್ ಕಾರ್ಯದರ್ಶಿ ಉನೈಸ್ ಬಾಲ್ದಬೊಟ್ಟು, KCF ಕಾರ್ಯಕರ್ತ ನಿಯಾಝ್ ಅಹ್ಮದ್, SBS ವಿದ್ಯಾರ್ಥಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ಶಾಖಾ ಕಾರ್ಯದರ್ಶಿ ಉನೈಸ್ ಬಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !! Not allowed copy content from janadhvani.com