janadhvani

Kannada Online News Paper

ಯಶಸ್ವಿಯಾದ ಆಯುಷ್ಮಾನ್ ಕಾರ್ಡ್ ಅಭಿಯಾನ

ಕಲ್ಲೇರಿ, ಜಆ.3: SSF ಮೂರುಗೋಳಿ ಸೆಕ್ಟರ್ ವತಿಯಿಂದ SSF ಅಳಕ್ಕೆ ಯುನಿಟ್ ಕೇಂದ್ರೀಕರಿಸಿ ಹೆಲ್ಪ್ ಲೈನ್ ಪುತ್ತೂರು ತಂಡದಿಂದ ಇಂದು ಅಳಕ್ಕೆಯಲ್ಲಿ ನಡೆದಂತಹ ಆಯುಷ್ಮಾನ್ ಕಾರ್ಡ್ ಅಭಿಯಾನವು ಸಂಪೂರ್ಣ ಯಶಸ್ವಿಯಾಗಿದೆ.

ಬೆಳಗ್ಗೆ 9:45 ಕ್ಕೆ ಸಯ್ಯಿದ್ ಮುಸ್ತಫಾ ತಂಙಳ್ ಅಳಕ್ಕೆ ಯವರಿಂದ ಚಾಲನೆಗೊಂಡ ಶಿಬಿರವು ಸಂಜೆ ಸುಮಾರು 7:00 ಕ್ಕೆ ಯಶಸ್ವಿ 227 ಕಾರ್ಡುಗಳೊಂದಿಗೆ ಮುಕ್ತಾಯವಾಯಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮೊಹಲ್ಲಾ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಅಳಕ್ಕೆ , ಪ್ರ.ಕಾರ್ಯದರ್ಶಿಗಳಾದ ಅಬೂಬಕ್ಕರ್ ಪುಂಡಿಕ್ಕು , ಎಸ್ ಎಸ್ ಎಫ್ ಮೂರುಗೋಳಿ ಸೆಕ್ಟರ್ ಅಧ್ಯಕ್ಷರಾದ ಇಬ್ರಾಹೀಂ ಸಅದಿ , ಡಿವಿಷನ್ ನಾಯಕರಾದ ಜುನೈದ್ ತುರ್ಕಳಿಕೆ, ಡಿವಿಷನ್ ಬ್ಲಡ್ ಸೈಬೋ ಉಸ್ತುವಾರಿಗಳಾದ ಇಸ್ಹಾಕ್ ಮದನಿ ಅಳಕ್ಕೆ ,ಸೆಕ್ಟರ್ ಎಕ್ಸಿಕ್ಯುಟಿವ್ಗಳಾದ ನಾಸಿರ್ ಅಳಕ್ಕೆ, ಸಾಹುಲ್ ಹಮೀದ್ ಅಳಕ್ಕೆ, ಎಸ್ ಎಸ್‌ ಎಫ್ ಅಳಕ್ಕೆ ಶಾಖೆಯ ಪ್ರಧಾನ ಕಾರ್ಯದರ್ಶಿ ಸಮೀರ್ ಅಳಕ್ಕೆ , ಜೊತೆ ಕಾರ್ಯದರ್ಶಿಗಳಾದ ಮುಸ್ತಫಾ ಅಳಕ್ಕೆ , ಸುಫಿಯಾನ್ ಸೌರಿ ಅಳಕ್ಕೆ ಹಾಗೂ ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ಕಾರ್ಯಕರ್ತರು , ಆಯುಸ್ಮಾನ್ ಕಾರ್ಡ್ ಮಾಡಿಸಲು ಬಂದ ಸಹೋದರ , ಸಹೋದರಿಯರು ಪಾಲ್ಗೊಂಡಿದ್ದರು.

error: Content is protected !! Not allowed copy content from janadhvani.com