ರಿಯಾದ್: ಕೊರೋನ ಭೀತಿಯ ಹಿನ್ನೆಲೆಯಲ್ಲಿ, ಮಕ್ಕಾ ಮದೀನಾಗಳ ಹರಮ್ಗಳನ್ನು ಸೋಂಕು ಮುಕ್ತಗೊಳಿಸುವುದರ ಭಾಗವಾಗಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಕಅಬಾ ಪ್ರಾಂಗಣವನ್ನು ಇಂದು ಸಂಪೂರ್ಣವಾಗಿ ಜನರಿಂದ ಮುಕ್ತಗೊಳಿಸಲಾಯಿತು.

ಕಅಬಾದ ಸುತ್ತಲೂ ಬೆಲ್ಟ್ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲಿನ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ತವಾಫ್ ನಿರ್ವಹಣೆಗೆ ಕಅಬಾ ಸುತ್ತ ಇರುವ ಮಾತಾಫ್ ಸಮುಚ್ಚಯವನ್ನು ಉಪಯೋಗಿಸಬಹುದಾಗಿದೆ.

ಕೋವಿಡ್ 19 ರಕ್ಷಣೆಯ ಭಾಗವಾಗಿ ಹರಮ್ ಮಸೀದಿಯ ಬಳಿ ವಿವಿಧ ಬೋರ್ಡ್ಗಳನ್ನು ಸ್ಥಾಪಿಸಲಾಗಿದ್ದು,
ಪ್ರತಿದಿನ ಇಶಾ ನಮಾಝ್ನ ನಂತರ, ಎರಡೂ ಹರಮ್ಗಳನ್ನು ಮುಚ್ಚಲಾಗುತ್ತದೆ. ಪ್ರತೀ ದಿನ 6 ಬಾರಿ ಅಣುಮುಕ್ತಗೊಳಿಸಿ, ಸುಬಹಿ ನಮಾಝ್ಗಿಂತ ಒಂದು ಗಂಟೆ ಮೊದಲು ತೆರೆಯಲಾಗುತ್ತದೆ. ಪ್ರಾರ್ಥನೆ ಸಮಯ ಹೊರತುಪಡಿಸಿ ಕಠಿಣ ಅಣು ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಸಚಿವಾಲಯವನ್ನು ಉದ್ದರಿಸಿ ಸೌದಿ ಮಾಧ್ಯಮ ವರದಿ ಮಾಡಿದೆ.

ಝಂಝಂ ನೀರು ಸಂಗ್ರಹಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹರಮ್ ಮಸೀದಿಯೊಳಗಿನ ಎಲ್ಲಾ ಝಂಝಂ ಬಾಟಲಿಗಳನ್ನು ಬದಲಾಯಿಸಲಾಗುತ್ತಿದೆ.

ಅದೇ ಸಮಯದಲ್ಲಿ, ಮತಾಫ್ನಲ್ಲಿನ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ. ವಿಶ್ವಾಸಿಗಳು ಇನ್ನೂ ಪ್ರಾರ್ಥನೆಗಾಗಿ ತಲುಪುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಇಅ್ತಿಕಾಫ್ ಕೂರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಸೀದಿಯ ಒಳಗೆ ಯಾವುದೇ ಆಹಾರ ಪದಾರ್ಥವನ್ನು ಅನುಮತಿಸಲಾಗುವುದಿಲ್ಲ.

ನಿಯಮಗಳು ಮದೀನಾ ಮಸೀದಿಗೂ ಅನ್ವಯಿಸುತ್ತವೆ. ಪ್ರವಾದಿಯವರ ಕುಟುಂಬ, ಸಹಚರರು ಮತ್ತು ಇತರ ಗಣ್ಯರನ್ನು ಸಮಾಧಿ ಮಾಡಲಾದ ಮದೀನಾದ ಜನ್ನತುಲ್ ಬಕೀಅ್ಗೆ ಭೇಟಿ ನೀಡುವುದನ್ನು ಕೂಡ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು