ಮಧುಗಿರಿಯ ಅತುಲ್ ಕುಮಾರ್ ಎಂಬಾತ ಮಧಿಗಿರಿ ಮೋದಿ ಎಂಬ ಹೆಸರಿನಲ್ಲಿ ಮುಸ್ಲಿಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್(ಸ.ಅ) ರ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪ ಡಿವಿಷನ್ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ನಾಯಕರು ಕೊಪ್ಪ ಪೋಲಿಸ್ ಸಬ್ ಇನ್ಸ್ಪೆಕ್ಟರ್ ರವಿ ಅವರನ್ನು ಅವರ ಕಛೇರಿಯಲ್ಲಿ ಭೇಟಿಯಾಗಿ ದೂರು ದಾಖಲಿಸುವಂತೆ ಮನವಿ ಸಲ್ಲಿಸಿ,ಜಾಗತಿಕ ಮುಸ್ಲಿಮರನ್ನು ಕೆರಳಿಸುವ ಕೆಲಸ ಮಾಡಿರುವ ಇವನನ್ನು ಶಾಶ್ವತವಾಗಿ ಬಂಧಿಸಬೇಕೆಂದು ಆಗ್ರಹಿಸಿತು.
ದೂರು ಸ್ವೀಕರಿಸಿದ ಕೊಪ್ಪ ಪೋಲಿಸ್ ಸಬ್ ಇನ್ಸ್ಪೆಕ್ಟರ್ ರವಿಯವರು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಆಬಿದ್ ಸಖಾಫಿ ಮಾಗುಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರ್ಫುದ್ದೀನ್ ಕುದುರೆಗುಂಡಿ, ಜಿಲ್ಲಾ ನಾಯಕರುಗಳಾದ ಸಲೀಮ್ ಕುದುರೆಗುಂಡಿ, ಶಮೀಮ್ ಕುದುರೆಗುಂಡಿ ಹಾಗೂ ಕೊಪ್ಪ ಡಿವಿಷನ್ ಅಧ್ಯಕ್ಷರಾದ ಸಾದಿಕ್ ಶೃಂಗೇರಿ ಪ್ರಧಾನ ಕಾರ್ಯದರ್ಶಿ ಶರೀಫ್ ಕುದುರೆಗುಂಡಿ, ಡಿವಿಷನ್ ನಾಯಕರಾದ ಸಲೀಮ್, ನಿಝಾಮುಧ್ಧೀನ್, ಶಂಶುಧ್ಧೀನ್,ಸಾದಾತ್ ಉಪಸ್ಥಿತರಿದ್ದರು.