janadhvani

Kannada Online News Paper

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್: ಮಧುಗಿರಿ ಮೋದಿ ವಿರುದ್ಧ ಬಿ.ಸಿ ರೋಡ್ ನಗರ ಠಾಣೆಯಲ್ಲಿ ದೂರು

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಸಮಾಜ ಘಾತುಕ ಸಂದೇಶಗಳನ್ನು ರವಾನಿಸಿ, ಕೋಮುಧ್ವೇಷ ಹರಡುತ್ತಿರುವ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿಯ ವಿರುದ್ಧ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಬಿ.ಸಿ ರೋಡ್ ನಗರ ಠಾಣೆಯಲ್ಲಿ ದೂರು ನೀಡಲಾಯಿತು.

ಈತ ಪದೇ ಪದೇ ತನ್ನ ಫೇಸ್ಬುಕ್ ಖಾತೆಯಲ್ಲಿ ಧಾರ್ಮಿಕ ನಿಂದನೆ ನಡೆಸುತ್ತಿದ್ದು, ಇದೀಗ ವಿಶ್ವ ಪ್ರವಾದಿ ಮುಹಮ್ಮದ್ ಬೈಗಂಬರರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ,ಶಾಂತಿಯುತ ಸಮಾಜದೆಡೆಯಲ್ಲಿ ವಿಧ್ವೇಷವನ್ನುಂಟು ಮಾಡಲು ಮುಂದಾಗಿದ್ದಾನೆ.

ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ನಾಯಕರ ನಿಯೋಗವು ಬಿ.ಸಿ ರೋಡ್ ನಗರ ಠಾಣೆಯಲ್ಲಿ ದೂರು ದಾಖಲಿಸಿತು.

error: Content is protected !! Not allowed copy content from janadhvani.com