ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ; ಅಲ್ ಮುದಾವಲ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿಯ ವಾರ್ಷಿಕ ಕೌನ್ಸಿಲ್ ಅಲ್ ಮುದಾವಲ 2, ಫೆಬ್ರವರಿ 9ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು. ಡಿವಿಷನ್ ಎಸ್ಸೆಸ್ಸೆಫ್ ಅಧ್ಯಕ್ಷರಾದ ಜಿ.ಕೆ ಇಬ್ರಾಹೀಂ ಅಂಜದಿ ದುಆ ನೆರೆವೇರಿಸಿದರು.

ಕೆ.ಸಿ.ಎಫ್ ಅಬುದಾಭಿ ಸದಸ್ಯ ಕಬೀರ್ ಜಟ್ಟಿಪಳ್ಳ, ಎಸ್.ವೈ.ಎಸ್ ದ.ಕ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಮುಖ್ಯ ಅತಿಥಿಗಳಾಗಿದ್ದರು. ಸೆಕ್ಟರ್ ಸಮಿತಿ ಹಾಗೂ ಅಧೀನದ ಹತ್ತು ಶಾಖೆಗಳಲ್ಲಿ ವರುಷವೊಂದರಲ್ಲಿ 25 ಲಕ್ಷ ರುಪಾಯಿಗಳ ಸೇವಾ ಕಾರ್ಯಚಟುವಟಿಕೆ ಹಾಗೂ ಕಾರ್ಯಾಚರಣೆಗಳು ನಡೆಸಲಾಗಿದೆ.
ಸಾಂಘಿಕ ಅವಧಿಯ ಒಂದು ವರುಷದ ಕಾರ್ಯಸಾಧನೆಗಳ ವಿವರ ಮತ್ತು ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ವೀಕ್ಷಕರಾಗಿದ್ದರು.
ನೂತನ ಸಮಿತಿ : ಸ್ವಬಾಹ್ ಹಿಮಮಿ (ಅಧ್ಯಕ್ಷ) ಸಿದ್ದೀಖ್ ಎಲಿಮಲೆ (ಪ್ರ. ಕಾರ್ಯದರ್ಶಿ) ಅಝೀಝ್ ಮಾಸ್ಟರ್ ಏಣಾವರ (ಕೋಶಾಧಿಕಾರಿ) ಶಾಕಿರ್ ಮೊಗರ್ಪಣೆ (ಕ್ಯಾಂಪಸ್ ಕಾರ್ಯದರ್ಶಿ) ಸಿದ್ದೀಖ್ ಹಿಮಮಿ, ಹಾರಿಸ್ ಗೂನಡ್ಕ (ಉಪಾಧ್ಯಕ್ಷರು) ಸಿದ್ದೀಖ್ ಬಿ.ಎ, ಶರೀಫ್ ಮೊಗರ್ಪಣೆ (ಕಾರ್ಯದರ್ಶಿಗಳು) ನಾಸಿರ್ ಎಲಿಮಲೆ, ಶಾಕಿರ್ ಎಲಿಮಲೆ, ಸ್ವಾದಿಖ್ ಪಿ.ಜಿ, ಬಶೀರ್ ಕಲ್ಲುಮುಟ್ಲು, ಅಬ್ದುಲ್ ರಹ್ಮಾನ್ ಮೊಗರ್ಪಣೆ, ಅಝ್ಹರ್ ಏಣಾವರ, ಕಾಶಿಂ ಗೂನಡ್ಕ, ಅಬೂ ಸ್ವಾಲಿಹ್ ಗುತ್ತಿಗಾರು, ರಹೀಂ ಪೈಂಬಚ್ಚಾಲ್ (ಸದಸ್ಯರು)
ಸಿದ್ದೀಖ್ ಹಿಮಮಿ ಸ್ವಾಗತಿಸಿ ಸಿದ್ದೀಖ್ ಎಲಿಮಲೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ