janadhvani

Kannada Online News Paper

ಕಂದಾವರ ಪದವು: 71ನೇ ಗಣರಾಜ್ಯೋತ್ಸವ ಆಚರಣೆ

ಗುರುಪುರ ಕೈಕಂಬ: ಸಂವಿಧಾನವನ್ನು ಸಂರಕ್ಷಿಸಿ ದೇಶವನ್ನು ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ 71ನೇ ಗಣರಾಜ್ಯೋತ್ಸವ ಆಚರಣೆಯು ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಪದವು ಮಸೀದಿ ವಾಠಾರದಲ್ಲಿ ನಡೆಯಿತು.

ಜಮಾಅತ್ತಿನ ಗೌರವಾಧ್ಯಕ್ಷರಾದ ಕೆ. ಎಂ ಬಾವ ಧ್ವಜಾರೋಹಣಗೈದರು.ಸ್ಥಳೀಯ ಮದ್ರಸ ಅಧ್ಯಾಪಕರಾದ ಅಬ್ದುಲ್ ರಝಾಕ್ ಮದನಿ ಸಂದೇಶ ಭಾಷಣ ಮಾಡಿದರು.

NRC CAA NPR ಮುಂತಾದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ವಿರೋಧಿಸುವ ಮೂಲಕ ನೈಜ ಭಾರತೀಯರಾಗಿ.ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಉಳಿಸುವಂತೆ ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಇದರ ಅಧ್ಯಕ್ಷರಾದ ಜನಾಬ್ ಅಬ್ದರ್ರಹ್ಮಾನ್ ಮೂನ್ಲೈಟ್ ತಮ್ಮ ಸಂದೇಶದಲ್ಲಿ ತಿಳಿಸಿದರು.

error: Content is protected !! Not allowed copy content from janadhvani.com