ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಇದರ ವತಿಯಿಂದ ಸಖಾಫಿ ಸಂಗಮ ಮತ್ತು ವಾರ್ಷಿಕ ಮಹಾಸಭೆ ದಿನಾಂಕ ಜನವರಿ 28-2020 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಪಡೀಲ್ ಇಲ್ಮ್ ಸೆಂಟರಿನ ಮರ್ಹೂಂ ಬೀರಾನ್ ಕುಟ್ಟಿ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಅಶ್ ಅರಿಯ್ಯಃ ಮುಹಮ್ಮದಾಲಿ ಸಖಾಫಿ ಉದ್ಘಾಟಿಸುವರು. ಮರ್ಕಝ್ ಮತ್ತು ಅದರ ಕಾರ್ಯವೈಖರಿಗಳು ಎಂಬ ವಿಷಯದ ಕುರಿತು ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ವಿಷಯ ಮಂಡಿಸಿ ಮಾತನಾಡಲಿರುವರು.
ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಪ್ರತಿನಿಧಿಯಾಗಿ ಅಬ್ದುರ್ರಶೀದ್ ಸಖಾಫಿ ಗಡಿಯಾರ ಭಾಗವಹಿಸಲಿರುವರು. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿರುವ ಸರ್ವ ಸಖಾಫಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.