ಉಪ್ಪಿನಂಗಡಿ,ಡಿ.12:ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಹಿರಿಯ ವಿದ್ವಾಂಸರೂ ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ ಆದ ಶೈಖುನಾ ಹೈದರ್ ಮದನಿ ಉಸ್ತಾದ್ ಕರಾಯ ಇವರ ಶಿಷ್ಯಂದಿರ ಒಕ್ಕೂಟ ತಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಇದರ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಹಾಗು ವಾರ್ಷಿಕ ಮಹಾಸಭೆಯು ಇಂದು ಲುಹ್ರ್ ನಮಾಝಿನ ಬಳಿಕ ಶೈಖುನಾ ಕೆ.ಎಂ ಹೈದರ್ ಉಸ್ತಾದರ ನಿವಾಸದಲ್ಲಿ ನಡೆಯಲಿದೆ.
ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಶೈಖುನಾ ಕೆ.ಎಂ ಉಸ್ತಾದರ ಎಲ್ಲಾ ಶಿಷ್ಯಂದಿರು ಕಡ್ಡಾಯವಾಗಿ ಭಾಗವಹಿಸಬೇಕಾಗಿ THSFಇದರ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡಾವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.