ಮಾಣಿ : ತಾಜುಲ್ ಉಲಮಾ ಇಹ್ಯಾ ಉಲೂಮುದ್ದೀನ್ ಮದ್ರಸ ಸತ್ತಿಕಲ್ಲು ಇದರ ವತಿಯಿಂದ ಮೀಲಾದ್ ಫೆಸ್ಟ್ ಕಾರ್ಯಕ್ರಮ ಶನಿವಾರ ನಡೆಯಿತು.ಅಬ್ದುಲ್ ನಾಸಿರ್ ಕಾಮಿಲ್ ಸಖಾಫಿ ನೇತೃತ್ವದಲ್ಲಿ ಹಝ್ರತ್ ಗೈಬಾನ್ ಶಾ ಫೀರ್ ವಲಿಯುಲ್ಲಾಹ್ ಪೇರಮೊಗರು ದರ್ಗಾ ಶರೀಫ್ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಸಾದಾತ್ ತಂಙಳ್ ಕರ್ವೇಲು ದುಆ ನೆರವೇರಿಸಿದರು,ಅಬ್ದುಲ್ ಹಮೀದ್ ಸತ್ತಿಕಲ್ಲು ಅಧ್ಯಕ್ಷತೆ ವಹಿಸಿದ್ದರು,ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿದರು,ಮುಹಮ್ಮದ್ ಶರೀಫ್ ಸಖಾಫಿ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಶಿಕ್ ಸತ್ತಿಕಲ್ಲು,ನಿಯಾಝ್ ಸತ್ತಿಕಲ್ಲು,ಆಶ್’ಹರ್ ಪೇರಮೊಗರು ಎಂಬ ವಿದ್ಯಾರ್ಥಿಗಳಿಗಳನ್ನು ಸನ್ಮಾನಿಸಲಾಯಿತು.ಮಕ್ಕಳ ಪ್ರತಿಭಾ ಕಾರ್ಯಕ್ರಮದೊಂದಿಗೆ ಬುರ್ದಾ ಮಜ್ಲಿಸ್ ನಡೆಯಿತು, ದಾರುಲ್ ಮುಸ್ತಫಾ ನಚ್ಚಬೆಟ್ಟು ಇದರ ಆಸಿಫ್ ಮುಸ್ಲಿಯಾರ್ ಸತ್ತಿಕಲ್ಲು,ತಾಜುಲ್ ಉಲಮಾ ಫೌಂಡೇಶನ್ ಕರ್ವೇಲು ಇದರ ಅಧ್ಯಾಪಕರುಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು,ಅಝೀಝ್ ಸತ್ತಿಕಲ್ಲು ಹಾಗೂ ಸ್ವಾದಿಖ್ ಕಡಂಬು ಕಾರ್ಯಕ್ರಮ ನಿರೂಪಿಸಿದರು,ಅನ್ಸಾರ್ ಸತ್ತಿಕಲ್ಲು ಧನ್ಯವಾದಗೈದರು.