ರಿಯಾದ್: ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ(UDC)ರಿಯಾದ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆ ಮತ್ತು ‘ಬೃಹತ್ ಮೌಲೀದ್ ಮಜ್ಲಿಸ್’ ದಿನಾಂಕ-15/11/2019 ಶುಕ್ರವಾರ ಬೆಳಿಗ್ಗೆ ‘ದಾರುಲ್ ಫಲಾಹ್ ರಬುವ ರಿಯಾದ್ ನಲ್ಲಿ ನಡೆಯಿತು.
ಸಮಿತಿಯ ಗೌರಾವಧ್ಯಕ್ಷರಾದ ಅಬ್ದುಲ್ ಝ್ಝಾಖ್ ಹಾಜಿ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಪಿ.ಕೆ.ಎಂ.ಆಸಿಫ್ ಸಭೆಯನ್ನು ಸ್ವಾಗತಿಸಿದರು. ಖಿರಾಆತನ್ನು ಪಿ.ಕೆ.ಎಂ.ಹನೀಫ್ ಪಠಿಸಿದರು.
UDC ಸಲಹಾ ಸಮಿತಿ ಸದಸ್ಯರಾದ ಪಿ.ಕೆ.ಯಾಕುಬ್ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ”ಪ್ರವಾಸಿಗಳಾದ ನಾವು ನಮ್ಮ ಹೃಸ್ವ ಜೀವನದಲ್ಲಿ ನಮಗೆ ಸಿಗುವ ಸಣ್ಣ ಮಟ್ಟದ ಸಂಬಳದಿಂದ ನಮ್ಮ ಊರಿನ ಮಸೀದಿಗಾಗಿ, ಜಮಾಅತ್ತಿಗಾಗಿ ವ್ಯಯಿಸುವುದು ನಾಳೆ ನಾವು ಮರಣ ಹೊಂದಿದ ಸಂದರ್ಭದಲ್ಲಿ ಅದರ ಪ್ರತಿಫಲ ನಮಗೆ ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದರು.
ಬಳಿಕ ಪ್ರಧಾನ ಕಾರ್ಯದರ್ಶಿ ಪಿ.ಕೆ.ಎಂ.ಆಸಿಫ್ ಮಂಡಿಸಿದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.ನಂತರ ಹಳೆಯ ಸಮಿತಿಯನ್ನು ಬರ್ಕಾಸು ಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
2019-20 ನೂತನ ಸಾರಥಿಗಳು:
ಗೌರವಾಧ್ಯಕ್ಷರು: ಅಬ್ದುಲ್ ರಝ್ಝಾಖ್ ಹಾಜಿ ಉಜಿರೆ
ನಿರ್ದೇಶಕರು:ಅಲ್-ಹಾಜ್ ಪಿ.ಕೆ.ಯಾಕುಬ್ ಮದನಿ ಕೊರಿಂಜ
ಅಧ್ಯಕ್ಷರು: PK.ದಾವೂದ್ ಸಅದಿ ಉರುವಾಲು ಪದವು
ಉಪಾಧ್ಯಕ್ಷರು: UP ಮುಹಮ್ಮದ್ ಶರೀಫ್,UP ಅಬ್ಬಾಸ್ ಮಲೆಂಗಲ್ಲು
ಪ್ರ ಕಾರ್ಯದರ್ಶಿ: UP ನೌಮಾನ್ ಪದವು
ಜೊತೆ ಕಾರ್ಯದರ್ಶಿ:ಪಿ.ಕೆ.ಎಂ.ಹನೀಫ್ ಶೂಂಠಿಪಳಿಕೆ, PK ಸಿದ್ದೀಖ್ ಪದವು
ಸಂಘಟನಾ ಕಾರ್ಯದರ್ಶಿ:PKM ಆಸಿಫ್ ಶೂಂಠಿಪಳಿಕೆ
ಸಂಘಟನಾ ಸಹ ಕಾರ್ಯದರ್ಶಿ: UP ಇಸ್ಹಾಖ್ ಮದನಿ
ಕೋಶಾಧಿಕಾರಿ:UP ನಾಸಿರ್
ಬಳಿಕ ಸಭಾದ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಉಜಿರೆ ಮಾಡುತ್ತಾ UDC ಯ ಕಾರ್ಯ ಚಟುವಟಿಕೆಯನ್ನು ಮುಕ್ತ ಕಂಟದಿಂದ ಶ್ಲಾಘಿಸಿದರು. ನೂತನ ಅದ್ಯಕ್ಷರಾದ PK ದಾವೂದು ಸಅದಿ ಮಾತನಾಡಿದರು.ನೂತನ ಕಾರ್ಯದರ್ಶಿ ನೌಮಾನ್ UP ವಂದಿಸಿದ ಸಭೆ 3 ಸ್ವಲಾತಿನೊಂದಿಗೆ ಕೊನೆಗೊಂಡಿತು.