ಮಂಗಳೂರು,ಅ.14: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ನೆಹರೂ ಮೈದಾನದಲ್ಲಿ ಇದೇ ಬರುವ ನವೆಂಬರ್ 7 ರಂದು ಗುರುವಾರ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಮೀಲಾದ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನವೆಂಬರ್ 7 ರಂದು ಅಪರಾಹ್ನ 1 ಘಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಕೆ ಖಾದರ್ ಹಾಜಿ ಧ್ವಜಾರೋಹಣ ನಡೆಸುವರು. 2 ಗಂಟೆಗೆ ಎಸ್ ವೈ ಎಸ್, ಎಸ್ಸೆಸ್ಸೆಫ್, ಮುಅಲ್ಲಿಮ್ ಸಂಘಟನೆಗಳ ವತಿಯಿಂದ ನಗರದಲ್ಲಿ ಮೀಲಾದ್ ರ್ಯಾಲಿ ನಡೆಯಲಿದ್ದು ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಚಾಲನೆ ನೀಡುವರು.
ಸಂಜೆ 4 ಗಂಟೆಗೆ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೇರವೇರಿಸಲಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಕಹಾಅ್ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಉದ್ಘಾಟಿಸಲಿದ್ದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಹುಬ್ಬುರ್ರಸೂಲ್ ಭಾಷಣ ಮಾಡುವರು. ಝೈನುಲ್ ಉಲಮಾ ಮಾಣಿ ಉಸ್ತಾದ್, ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ತೋಕೆ ಮುಹ್ಯಿದ್ದೀನ್ ಸಖಾಫಿ, ಸಂದೇಶ ಭಾಷಣ ಮಾಡಲಿರುವರು.
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ, ಮುಅಲ್ಲಿಮೀನ್, ಎಸ್ಸೆಸ್ಸೆಫ್, ಎಸ್.ಎಂ.ಎ., ಎಸ್.ಇ.ಡಿ.ಸಿ., ಮುಸ್ಲಿಂ ಜಮಾಅತ್, ಕೆಸಿಎಫ್ ಸಂಘಟನೆಗಳ ನಾಯಕರು ಶುಭ ಹಾರೈಸಿ ಮಾತನಾಡಲಿರುವರು.
ಪಕರ್ನಾಟಕ ಮಾಜಿ ಸಚಿವ ಯುಟಿ ಖಾದರ್ , ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್
ಯೇನೆಪೋಯಾ ಯುನಿವರ್ಸಿಟಿ ಕುಲಪತಿ ವೈ ಅಬ್ದುಲ್ಲ ಕುಂಞಿ ಹಾಜಿ, ಕೆ ಸಿ ಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ಹಾಜಿ ಶೇಖ್ ಬಾವ ಅಬೂಧಾಬಿ, ಹಾಜಿ ಎಸ್.ಎಂ.ರಶೀದ್ ಮುಂತಾದ ನಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಡಾ. ಎಮ್ಮೆಸ್ಸೆಮ್ ಝೈನೀ ಕಾಮಿಲ್(ಪ್ರಧಾನ ಕಾರ್ಯದರ್ಶಿ ಎಸ್ ವೈ ಎಸ್ ಕರ್ನಾಟಕ) ,ಹಾಜಿ ಬಿ.ಎಂ.ಮುಮ್ತಾಝ್ ಅಲಿ (ಗೌರವಾಧ್ಯಕ್ಷರು ಹುಬ್ಬುರಸೂಲ್ ಸ್ವಾಗತ ಸಮಿತಿ),ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು (ಅಧ್ಯಕ್ಷರು ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸ್ವಾಗತ ಸಮಿತಿ) ,ಅಲ್ ಹಾಜ್ ಉಸ್ಮಾನ್ ಸಅದಿ ಪಟ್ಟೋರಿ(ಜನರಲ್ ಕನ್ವೀನರ್ ಹುಬ್ಬುರ್ರಸೂಲ್ ಸ್ವಾಗತ ಸಮಿತಿ), ಎಸ್ ಎಂ ಬಶೀರ್ ಹಾಜಿ ಮಿತ್ತಬೈಲು (ಕೋಶಾಧಿಕಾರಿ ಹುಬ್ಬುರ್ರಸೂಲ್ ಸ್ವಾಗತ ಸಮಿತಿ), ಹಾಫಿಳ್ ಯಾಕೂಬ್ ಸಅದಿ ನಾವೂರು (ಮೀಡಿಯಾ ಕಾರ್ಯದರ್ಶಿ ಹುಬ್ಬುರ್ರಸೂಲ್ ಸ್ವಾಗತ ಸಮಿತಿ), ಅಶ್ರಫ್ ಕಿನಾರ(ಚೀಫ್ ಕೋಆರ್ಡಿನೇಟರ್ಹುಬ್ಬುರ್ರಸೂಲ್ ಸ್ವಾಗತ ಸಮಿತಿ) ಉಪಸ್ಥಿತರಿದ್ದರು.