janadhvani

Kannada Online News Paper

SSF ಮಿತ್ತರಾಜೆ ಶಾಖೆಯಿಂದ ಧ್ವಜ ದಿನ ಕಾರ್ಯಕ್ರಮ

ಸಾಲೆತ್ತೂರ್: (ಸೆ19) ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ಇದರ ಧ್ವಜ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಪಂಜರಕೋಡಿ ರಿಫಾಇಯ್ಯ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಅಲ್ಲಿಂ ಶರೀಫ್ ಹನೀಫಿ ಮಾರ್ನಾಡ್ ಸ್ವಾಗತಿಸಿದರು, ಪಂಜರಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕರ್ ಮದನಿ ಉಸ್ತಾದ್ ಹಾಗೂ ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ಅಧ್ಯಕ್ಷರಾದ ದಾವುದ್’ರವರು ಸೇರಿ ಧ್ವಜಾರೋಹಣ ನೆರವೇರಿಸಿದರು, ನಂತರ ಉಸ್ತಾದ್ ಹಿತೋಪದೇಶ ನೀಡಿದರು, ಜುಮಾ ಮಸೀದಿ ಪ್ರದಾನ ಕಾರ್ಯದರ್ಶಿ ಉಮ್ಮರ್ ಅಬ್ಬೆಮ್ಮಾರ್‌ರವರು ಧನ್ಯವಾದಗೈದರು.

ಕಾರ್ಯಕ್ರಮದಲ್ಲಿ ಪಂಜರಕೋಡಿ ರಿಫಾಇಯ್ಯ ಜುಮಾ ಮಸೀದಿ ಅಧ್ಯಕ್ಷರಾದ ಮಜೀದ್ ಕಲ್ಲಕಟ್ಟ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಮಿತ್ತರಾಜೆ, ಎಸ್.ವೈ.ಎಸ್ ಪಂಜರಕೋಡಿ ಬ್ರಾಂಚ್ ಅಧ್ಯಕ್ಷರಾದ ಹಮೀದ್ ಬಿಬಿಸಿ, ಹಾಗೂ ಸುನ್ನೀ ಸಂಘ ಕುಟುಂಬಗಳ ನೇತಾರರು ಕಾರ್ಯಕರ್ತರು ಪಾಲ್ಗೊಂಡಿದ್ದರು.

error: Content is protected !! Not allowed copy content from janadhvani.com