janadhvani

Kannada Online News Paper

ಕಕ್ಕಿಂಜೆಯಲ್ಲಿ ಮುತ’ಅಲ್ಲಿಂ ಸಂಗಮ ಹಾಗೂ ಶರಫುಲ್ ಉಲಮಾ ಅನುಸ್ಮರಣೆ

ಉಜಿರೆ: SSF ಕಕ್ಕಿಂಜೆ ಶಾಖೆ ವತಿಯಿಂದ ಮುತ’ಅಲ್ಲಿಂ ಸಂಗಮ ಹಾಗೂ ಶರಫುಲ್ ಉಲಮಾ ಅನುಸ್ಮರಣಾ ಸಂಗಮ ವು ದಿನಾಂಕ 13/08/2019 ನೇ ಮಂಗಳವಾರ ಅಸರ್ ನಮಾಝಿನ ಬಳಿಕ ರಫೀಕ್ ಮದನಿಯವರ ಅಧ್ಯಕ್ಷತೆಯಲ್ಲಿ G.K ಹೌಸ್ ವಠಾರ ಕಕ್ಕಿಂಜೆಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು KCF ನಾಯಕರಾದ ಇಕ್ಬಾಲ್ ಕಕ್ಕಿಂಜೆಯವರು ಉದ್ಘಾಟಿಸಿದರು.ಹಾಫಿಲ್ ಅಶ್ರಫ್ ಸಖಾಫಿ ಮುತ’ಅಲ್ಲಿಂ ರಿಗೆ ತರಗತಿ ನಡೆಸಿದರು.ರಶೀದ್ ಸ’ಅದಿ ಅನುಸ್ಮರಣಾ ಭಾಷಣ ಸಡೆಸಿದರು.ರಫೀಕ್ ಅಹ್ಸನಿ,ಮದ್ದಡ್ಕ ರವರು ದುಃವಾ ನೆರವೇರಿಸಿದರು.KCF ನಾಯಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಬೀನ್ ಉಜಿರೆ, KCF ನಾಯಕರಾದ ನಾಸಿರ್,SYS ಕಕ್ಕಿಂಜೆ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಝೈನಿ,SYS ನಾಯಕರಾದ ಮೋನುಹಾಜಿ,SSF ಉಜಿರೆ ಸೆಕ್ಟರ್ ನಾಯಕರಾದ ಶಾಕಿರ್ ಉಜಿರೆ ಮೊದಲಾದವರು ಉಪಸ್ಥಿತಿತರಿದ್ದರು.
SSF ಕಕ್ಕಿಂಜೆ ಶಾಖೆ ಅಧ್ಯಕ್ಷರಾದ‌ ಸ್ವಾದಿಕ್ ಹನೀಫಿ ಸ್ವಾಗತಿಸಿದರು.ಶರೀಫ್ ಹಿಮಮಿ ಧನ್ಯವಾದವಿತ್ತರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com