ಉಡುಪಿ: ಎಸ್ಸೆಸ್ಸೆಫ್ ಉಡುಪಿ ಇದರ 2019 ರ ಅರ್ಧವಾರ್ಷಿಕ ಕೌನ್ಸಿಲ್ ಸಭೆಯು ದಿನಾಂಕ 27/7/19 ರಂದು ದಾರುಸ್ಸಲಾಂ ಮದ್ರಸ ಹಾಲ್ ಹೂಡೆ ಇಲ್ಲಿ, ಡಿವಿಷನ್ ಅಧ್ಯಕ್ಷರಾದ ಸೈಯದ್ ಯೂಸುಪ್ ತಂಘಲ್ ಹೂಡೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಮೇಲ್ಗಟಕದ ವೀಕ್ಷಕರಾಗಿ ಉಡುಪಿ ಜಿಲ್ಲಾ ನಾಯಕರಾದ ಹನೀಪ್ ನಯೀಮಿ ಬೈಂದೂರ್ ಉಪಸ್ಥಿತಿಯಲ್ಲಿ, ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಉಡುಪಿ ಇವರು ಮುಖ್ಯ ತರಗತಿ ನಡೆಸಿಕೊಟ್ಟರು. ಡಿವಿಷನ್ ಗೌರವ ಸಲಹೆಗಾರ ರಶೀದ್ ಉಸ್ತಾದ್ ಕಟಪಾಡಿ ದುವಾ ಮಾಡಿದರು, ಡಿವಿಷನ್ ಗೌರವ ಸಲಹೆಗಾರ ರಝಾಕ್ ಉಸ್ತಾದ್ ಅಂಬಾಗಿಲು ಉದ್ಘಾಟಿಸಿದರು. ಡಿವಿಷನ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಅರ್ಧ ವಾರ್ಷಿಕ ವರದಿ ವಾಚಿಸಿದರು.ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ ಲೆಕ್ಕಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ ಡಿವಿಷನ್ ಗೌರವ ಸಲಹೆಗಾರರಾದ ಸುಬುಹಾನ್ ಹೊನ್ನಾಳ, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಕ್ಯಾಂಪಸ್ ಕಾರ್ಯದರ್ಶಿ ಫಾರೂಕ್ ಪಿ.ಕೆ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದಿನ್ ರಂಗನಕೆರೆ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಶಾಹುಲ್ ದೊಡ್ಡಣಗುಡ್ಡೆ ಹಾಗು ಇನ್ನಿತರ ಸದಸ್ಯರು, ಕೌನ್ಸಿಲರ್ ಉಪಸ್ಥಿತಿ ಇದ್ದರು. ಡಿವಿಷನ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ವಂದಿಸಿದರು. ವರದಿ:ಪಿ ಎಂ ಎಸ್ ಪಡುಬಿದ್ರಿ.