ಕೋಟೆಕಾರ್:ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೊ ಇದರ 87 ನೇ ರಕ್ತ ದಾನ ಶಿಬಿರವು, ಜೂನ್ 16 ರಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ಅಧೀನದಲ್ಲಿ ಕಾರ್ಯಾಚರಿಸುವ ಎಸ್ಸೆಸ್ಸೆಫ್ ಕೊಟೇಕಾರ್ ಸೆಕ್ಟರ್ ನಲ್ಲಿ ಯೆನಪೊಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆ ಸೋಮೇಶ್ವರ ದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೊಟೇಕಾರ್ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಕೊಮರಂಗಳ ವಹಿಸಿದ್ದರು. SYS ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷರು ಜನಾಬ್ ಎನ್.ಎಸ್ ಉಮರ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೊ ಇದರ ಸಂಚಾಲಕ ಇಬ್ರಾಹಿಮ್ ಕರೀಂ ಕದ್ಕಾರ್ ಹಾಗೂ ಉಳ್ಳಾಲ ಡಿವಿಶನ್ ಬ್ಲಡ್ ಸೈಬೊ ಇದರ ಸಂಚಾಲಕ ಹಕೀಮ್ ಪೂಮಣ್ಣ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಉಪಾಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಡಿವಿಶನ್ ಅಧ್ಯಕ್ಷರು ಸಯ್ಯಿದ್ ಖುಬೈಬ್ ತಂಙಳ್,ಡಿವಿಶನ್ ಪ್ರದಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಕೆ ಸಿ ನಗರ, ದಱ್’ವಾ ಕನ್ವಿನರ್ ಝುಭೈರ್ ಝುಹ್ರಿ, ಹಂಝ ಕೆ ಎಂ, ಅಬ್ದುಲಾ ಎಂ ಎಂ,ಇಬ್ರಾಹಿಮ್ ಕೊಟೇಕಾರ್,ಮುಂತಾದ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಳ್ಳಾಲ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ ನಾಸಿರ್ ಎಸ್ ಅಜ್ಜಿನಡ್ಕ ರವರು ಸ್ವಾಗತಿಸಿದರು ಹಾಗೂ ಕೊಟೇಕಾರ್ ಸೆಕ್ಟರ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಅಜ್ಜಿನಡ್ಕ ವಂದಿಸಿದರು.