ವಿಟ್ಲ: ಈದ್ ಉಲ್ ಫಿತ್ರ್ ಹಬ್ಬದ ಸಂಭ್ರಮಾಚರಣೆಯೊಂದಿಗೆ SSF ಕೊಡಂಗಾಯಿ ಶಾಖೆಯ ವತಿಯಿಂದ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಕೊಡಂಗಾಯಿ ಸುನ್ನಿ ಸೆಂಟರ್ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ವೈಶಿಷ್ಟತೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸುನ್ನಿ ಸೆಂಟರ್ ಉಪಾಧ್ಯಕ್ಷರಾದ ಸಿ.ಎಚ್ ಉಮ್ಮರ್ ಮುಸ್ಲಿಯಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬೆದ್ರ ಬದ್ರುಲ್ ಹುದಾ ಮದ್ರಸಾ ಅಧ್ಯಾಪಕರಾದ ಇಕ್ಬಾಲ್ ಹನೀಫಿ ಉಸ್ತಾದರು ಪರಿಸರ ಕಾಳಜಿ ಕುರಿತು ವಿವರಣೆ ನೀಡಿದರು.
SSF ಕೊಡಂಗಾಯಿ ಶಾಖೆಯ ಅಧ್ಯಕ್ಷರಾದ ಎಂ.ಕೆ ಅಬ್ದುಲ್ ರಝಾಕ್, ಉಪಾಧ್ಯಕ್ಷರಾದ ಡಿ.ಎ.ಮುಹಮ್ಮದ್ ಅಶ್ರಫ್, ಕಾರ್ಯದರ್ಶಿ ರಮೀಝ್, SSF ವಿಟ್ಲ ಡಿವಿಷನ್ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಎಂ.ಕೆ ಮುಹಮ್ಮದ್ ತಮೀಮ್ ಕೊಡಂಗಾಯಿ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ