ದೋಹಾ: ಸೌಹಾರ್ದ ಸಂದರ್ಶನ ಮತ್ತು ವಿನೋದ ಸಂಚಾರಕ್ಕಾಗಿ ಆಗಮಿಸುವವರನ್ನು ಖತರ್ ಬರಮಾಡಿಕೊಂಡಿದೆ. ಬೇಸಿಗೆ ಕಾಲದಲ್ಲಿ ಉಲ್ಲಾಸ ಮತ್ತು ಶಾಪಿಂಗ್ ನಡೆಸಲು, ಹಬ್ಬ ಹರಿದಿನಗಳಲ್ಲಿ ಸಂದರ್ಶನ ನಡೆಸಲು ಇಚ್ಛಿಸುವವರಿಗೆ ಸಚಿವಾಲಯವು ಇ- ನೋಟಿಫಿಕೇಷನ್ ವ್ಯವಸ್ಥೆಯನ್ನು ಸಜ್ಜುಗೊಳಿಸಿದೆ.
ಆಗಸ್ಟ್ 16ರ ವರೆಗೆ ಉಲ್ಲಾಸ ಯಾತ್ರಿಕರು, ಅನಿವಾಸಿಗಳ ಬಂಧುಗಳು, ಮಿತ್ರರಿಗೆ ಖತರ್ ಸಂದರ್ಶನಗೈಯ್ಯಲು ಹಾದಿ ಸುಗಮಗೊಳಿಸುವುದು ಇ-ನೋಟಿಫಿಕೇಷನ್ನ ಉದ್ದೇಶವಾಗಿದ್ದು, ಸಂಚಾರಿಗಳೊಂದಿಗೆ ಖತರ್ಗೆ ಇರುವ ತೆರೆದ ಮನಸ್ಸು ಮತ್ತು ಸಂದರ್ಶಕರ ಅನುಭವಗಳನ್ನು ಉತ್ತಮಗೊಳಿಸಲು ‘ಸಮ್ಮರ್ ಇನ್ ಖತರ್’ ಮೂಲಕ ಸಾಧ್ಯವಿದೆ ಎಂದು ಅಲ್ಲಿನ ಗೃಹಸಚಿವಾಲಯ ನಿರೀಕ್ಷಿಸಿದೆ.
ರಾಷ್ಟ್ರೀಯ ಟೂರೀಸಂ ಕೌನ್ಸಿಲ್ ನ ಸಹಭಾಗಿತ್ವದೊಂದಿಗೆ ಈ ಯೋಜನೆ ರೂಪೀಕರಿಸಲಾಗಿದ್ದು, ಈ ಮೂಲಕ ಎಲ್ಲಾ ರಾಷ್ಟ್ರಗಳಿಂದ ಬರಲಿಚ್ಛಿಸುವವರಿಗೂ ಉಚಿತ ಆನ್ ಅರೈವಲ್ ವಿಸಾ ಲಭಿಸಲಿದೆ. ಅಗಸ್ಟ್ 16ರವರೆಗೆ ಆನ್ ಅರೈವಲ್ ಸೌಕರ್ಯಕ್ಕಾಗಿ http://qatarvisaservices.com ಎಂಬ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 24 ಗಂಟೆ ಒಳಗಾಗಿ ಸಮ್ಮತಿ ಪತ್ರದ ಕುರಿತು ಮಾಹಿತಿ ಲಭಿಸಲಿದೆ.
ಈ ಹಿಂದೆ ಭಾರತ ಸಹಿತ 83 ರಾಷ್ಟ್ರಗಳಿಗೆ ಉಚಿತ ಆನ್ ಅರೈವಲ್ ವಿಸಾ ಸೌಕರ್ಯಗಳನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಇತರ ರಾಷ್ಟ್ರಗಳಿಗೂ ವಿಸ್ತರಿಸಲಾಗಿದೆ. ಅನಿವಾಸಿಗಳ ಬಂಧುಗಳು, ಗೆಳೆಯರು ಆಗಿದ್ದಲ್ಲಿ ಮರಳುವ ಟಿಕೆಟ್, ಕಾಲಾವಧಿ ಇರುವ ಇಖಾಮಾ, ಬಂಧುತ್ವದ ಬಗ್ಗೆ ಮಾಹಿತಿ ಹೊಂದಿರಬೇಕು. ಈ ಹಿಂದೆ ಖತರ್ನಲ್ಲಿ ಅನಿವಾಸಿ ಜೀವನ ನಡೆಸಿದವರಿಗೂ ಈ ಸೌಕರ್ಯ ಲಭಿಸಲಿದೆ. ವಿನೋದ ಸಂಚಾರಕ್ಕೆ ಖತರ್ ದೇಶವನ್ನು ಆಯ್ಕೆ ಮಾಡುವವರಿಗೆ ಈ ಯೋಜನೆ ಉಪಯುಕ್ತವಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು