janadhvani

Kannada Online News Paper

ಸೌದಿ: ಅಪಘಾತದಲ್ಲಿ ಭಾರತೀಯರಿಬ್ಬರ ನಿಧನ- ಕೆಸಿಎಫ್ ನೆರವಿನಿಂದ ಅಂತ್ಯ ಕ್ರಿಯೆ

ಮದೀನಾ : ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯರಿಬ್ಬರು ಮೃತಪಟ್ಟ ಘಟನೆ ಎಪ್ರಿಲ್ 6ರಂದು ನಡೆದಿದೆ. ಮದೀನಾ ಮುನವ್ವರಕ್ಕೆ 80 ಕಿ.ಮಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕರ್ನಾಟಕ, ಹಾಸನದ ಅಬ್ದುಲ್ ಜಾವೀದ್ ಹಾಗೂ ಉತ್ತರ ಪ್ರದೇಶದ ಇರ್ಫಾನ್ ಎಂದು ಗುರುತಿಸಲಾಗಿದೆ.

ಅಪಘಾತ ಮಾಹಿತಿ ಅರಿತ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕಾರ್ಯಕರ್ತರು ಮೃತರ ದಫನ ಕಾರ್ಯಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಕಲೆಹಾಕಿದರು. ಮೃತರ ಸಂಬಂಧಿಕರ ಮೂಲಕ ಸೌದಿ ಅರೇಬಿಯಾದ ಪೊಲೀಸ್ ಇಲಾಖೆ, ಆಸ್ಪತ್ರೆ ಗಳ ದಾಖಲೆಗಳನ್ನು ಸಂಗ್ರಹಿಸಿದರು. ನಂತರ ಇಂಡಿಯನ್ ಎಂಬಾಸಿಯ NOCಗೆ ಬೇಕಾದ ಅಗತ್ಯ ದಾಖಲೆಗಳನ್ನು ಸರಿಪಡಿಸಿದರು.

ಜಾವೀದ್ ಅಂತ್ಯ ಸಂಸ್ಕಾರವನ್ನು ಸೋಮವಾರ ಇಶಾ ನಮಾಜಿನ ಬಳಿಕ ಹಾಗೂ ಇರ್ಫಾನ್ ಅವರ ಅಂತ್ಯ ಸಂಸ್ಕಾರವು ಮಂಗಳವಾರ ಲುಹ್ರ್ ನಮಾಜಿನ ಬಳಿಕ ಮದೀನಾ ಮುನವ್ವರದ ಜನ್ನತುಲ್ ಬಖೀದಲ್ಲಿ ನೆರವೇರಿಸಲಾಯಿತು. ಈ ವೇಳೆ ಮೃತರ ಸಂಬಂಧಿಕರು ಹಾಗೂ ಕೆಸಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್

error: Content is protected !! Not allowed copy content from janadhvani.com