ಜಿದ್ದಾ: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ತ್ವಾಯಿಫ್ ಸೆಕ್ಟರಿನ ಮಹಾಸಭೆಯು ಮಾ.15 ರಂದು ಶನಿವಾರ ರಾತ್ರಿ ತ್ವಾಯಿಫ್ ಕೆಸಿಎಫ್ ಭವನದಲ್ಲಿ ಅಧ್ಯಕ್ಷರಾದ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯ್ತು.
ಕಾರ್ಯದರ್ಶಿ ಹನೀಫ್ ಹಿಮಮಿ ಸ್ವಾಗತಿಸಿ, ಶಾನು ಕಾವೂರು ರವರು ಕಿರಾಅತ್ ಪಠಿಸಿದರು. ಕಾರ್ಯಕ್ರಮವನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸ ಹಾಜಿ ಕಿನ್ಯಾ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಿಲ ಹಾಗೂ ವೈಸ್ ಪ್ರಿನ್ಸಿಪಾಲ್ ಮುಹಿಮ್ಮಾತ್ ಕುರ್’ಆನ್ ರಿಸರ್ಚ್ ಸೆಂಟರ್ ಇದರ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿಯವರು ಸಂಘಟನೆಗೆ ಸಂಬಂಧಿಸಿದ ಸವಿಸ್ತಾರವಾದ ಉಪದೇಶವನ್ನು ನೀಡಿದರು.
ನಂತರ ಪ್ರಧಾನ ಕಾರ್ಯದರ್ಶಿ ಹನೀಫ್ ಹಿಮಮಿ ವರದಿ ಹಾಗೂ ಕೋಶಾಧಿಕಾರಿ ಅಶ್ರಫ್ ಮಂಡೆಕೋಲು ಲೆಕ್ಕ ಪತ್ರವನ್ನು ಸಭೆಯ ಮುಂದೆ ಮಂಡಿಸಿದರು.
ಝೋನ್ ನಿಂದ ರೀ- ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ಯವರು ಹಳೆ ಕಮಿಟಿಯನ್ನು ಬರ್ಕಾಸ್ತು ಗೊಳಿಸಿ ನೂತನ ಸಮಿತಿಯನ್ನು ರಚಿಸಿದರು.
ಅಧ್ಯಕ್ಷರು: ಹನೀಫ್ ಹಿಮಮಿ ಕುಂಡಡ್ಕ, ಪ್ರ.ಕಾರ್ಯದರ್ಶಿ: ಅಝ್ವೀರ್ ಬಡಕಬೈಲ್, ಕೋಶಾಧಿಕಾರಿ: ಹಂಝ ಮಡಿಕೇರಿ.
ಸಂಘಟನೆ ಇಲಾಖೆ
ಅಧ್ಯಕ್ಷರು: ಇಕ್ಬಾಲ್ ಮದನಿ ಪಾವೂರು.
ಕಾರ್ಯದರ್ಶಿ: ಅಯ್ಯೂಬ್ ಕುಂದಾಪುರ.
ಶಿಕ್ಷಣ ಇಲಾಖೆ
ಅಧ್ಯಕ್ಷರು: ಮುಹಮ್ಮದ್ ಝುಹ್ರಿ ಬೆಳಾಲ್.
ಕಾರ್ಯದರ್ಶಿ: ಹಮೀದ್ ಕರೋಪಾಡಿ.
ಸಾಂತ್ವನ ಇಲಾಖೆ
ಅಧ್ಯಕ್ಷರು: ಸಿದ್ದೀಖ್ ಕರೋಪಾಡಿ.
ಕಾರ್ಯದರ್ಶಿ: ರಿಯಾಝ್ ಉಳ್ಳಾಲ.
ಪ್ರಕಾಶನ ಇಲಾಖೆ
ಅಧ್ಯಕ್ಷರು: ಶಾನು ಕಾವೂರು.
ಕಾರ್ಯದರ್ಶಿ: ನಾಸಿರ್ ಬೋವು.
ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಮಂಡೆಕೋಲು, ಮನ್ಸೂರ್ ಕನ್ಯಾನ, ಸೌಕತ್ ಕಿನ್ಯಾ, ಅಬ್ಬಾಸ್ ಪುತ್ತೂರು, ನವಾಝ್ ಮುರಾ, ಅಬ್ದುಲ್ಲಾ ಕಂಬಳಬೆಟ್ಟು, ನಿಝಾಂ ಮುರಾ, ಹಾರಿಸ್ ಕುರ್ನಾಡು, ಸಲೀಂ ಅಂಡೆಕೇರಿ, ಇಸ್ಮಾಯಿಲ್ ಇನೋಳಿ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ಅಝ್ವೀರ್ ಬಡಕಬೈಲು ಧನ್ಯವಾದ ಗೈದರು.