janadhvani

Kannada Online News Paper

ದವಾದ್ಮಿ ಸೆಕ್ಟರ್ ನ ಅಧೀನದಲ್ಲಿ ಮಹ್ಳರತುಲ್ ಬದ್ರಿಯಾ ಹಾಗೂ ನೂತನ ಟೌನ್ ಯುನಿಟ್ ಅಸ್ತಿತ್ವಕ್ಕೆ

ದವಾದ್ಮಿ ಸೆಕ್ಟರ್ : ಗಸೀಂ ಝೋನ್, ದವಾದ್ಮಿ ಸೆಕ್ಟರ್ ನ ಅಧೀನದಲ್ಲಿ ನೂತನ ಟೌನ್ ಯುನಿಟ್ ದವಾದ್ಮಿ ಸೆಕ್ಟರ್ ಇದರ ಅಧ್ಯಕ್ಷರಾದ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರ ಅಧ್ಯಕ್ಷತೆಯಲ್ಲಿ ಯೂಸುಫ್ ಮದನಿ ಸುರಿಬೈಲ್ ಇವರ ದುವಾದೊಂದಿಗೆ ಐಸಿಎಫ್ ಹಾಲ್ ನಲ್ಲಿ ಜರುಗಿತು.

ಸಭೆಯನ್ನು ಕೆಸಿಎಫ್ ನ್ಯಾಶನಲ್ ಕಮಿಟಿ ಸದಸ್ಯರಾದ ಹಬೀಬ್ ಅಡ್ಡೂರ್ ಇವರು ಉದ್ಘಾಟಿಸಿ ಕೆಸಿಎಫ್ ಅಲೈಕುಂ ಬಿಲ್ ಜಮಾಅದ ಬಗ್ಗೆ ವಿವರಿಸಿದರು.

ಯುನಿಟ್ ರಚನೆ ಮಾಡಲು ಸೆಕ್ಟರ್ ನಿಂದ (RO) ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರು 17 ಮಂದಿ ಸದಸ್ಯರ ಯುನಿಟನ್ನು ಷೋಷಣೆ ಮಾಡಿ ಈ ಕೆಳಗಿನಂತೆ ಯುನಿಟ್ ಪದಾಧಿಕಾರಿಗಳನ್ನು ಆರಿಸಲಾಯಿತು.

ದವಾದ್ಮಿ ಟೌನ್ ಯುನಿಟ್ ಪದಾಧಿಕಾರಿಗಳು

ಅಧ್ಯಕ್ಷರಾಗಿ:ಯೂಸುಫ್ ಮದನಿ ಸುರಿಬೈಲ್, ಉಪಾಧ್ಯಕ್ಷರುಗಳಾಗಿ
ಹಸೈನಾರ್ ಸಅದಿ, ಮುಹಮ್ಮದ್ ಶಬೀರ್ ಶಿವಮೊಗ್ಗ

ಪ್ರಧಾನ.ಕಾರ್ಯದರ್ಶಿ
ಇಂಮ್ತಿಯಾಝ್ ದೇರಳಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ
ಇಮ್ತಿಯಾಝ್ ಉಡುಪಿ, ಅಬ್ದುಲ್ ಹಮೀದ್ ಉಳ್ಳಾಲ, ಕೋಶಾಧಿಕಾರಿಯಾಗಿ
ಅಬ್ದುಲ್ ಸಲಾಂ ಮಡಿಕೇರಿ, ಕಾರ್ಯಕಾರಿ ಸದಸ್ಯರುಗಳಾಗಿ, ಹಬೀಬ್ ಅಡ್ಡೂರ್, ಸವಾದ್ ಚಿಕ್ಕಮಗಳೂರು, ಹಮೀದ್ ಕರ್ವೇಲು, ವಹೀದ್ ಫಾಳಿಲಿ ಹಾಫಿಳ್, ಅಬ್ಬಾಸ್ ಮೊಂಟುಗೋಳಿ, ಇಸ್ಮಾಹೀಲ್ ಮೂಡಿಗೆರೆ, ಫಯಾಝ್ ಚೆನ್ನಾರ್, ಹಸನ್ ಆತೂರ್, ನೂರುಲ್ಲಾ ಶಿವಮೊಗ್ಗ, ರಾಶಿದ್ ರಝಾ ಹಾಫಿಳ್, ದಶ್ತಗೀರ್ ಶಿವಮೊಗ್ಗ, ಸೆಕ್ಟರ್ ಕೌನ್ಸಿಲರ್ಗಳಾಗಿ, ಹಬೀಬ್ ಅಡ್ಡೂರ್, ಸವಾದ್ ಚಿಕ್ಕಮಗಳೂರು, ಅಬ್ದುಲ್ ಸಲಾಂ ಮಡಿಕೇರಿ, ಇಂಮ್ತಿಯಾಝ್ ದೇರಳಕಟ್ಟೆ, ಹಮೀದ್ ಕರ್ವೇಲು, ಯೂಸುಫ್ ಮದನಿ ಸುರಿಬೈಲ್, ವಹೀದ್ ಫಾಳಿಲಿ ಹಾಫಿಳ್, ಇವರನ್ನು ಸರ್ವಾನುಮತ ಅಂಗೀಕಾರದೊಂದಿಗೆ ಆಯ್ಕೆಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯೂಸುಫ್ ಮದನಿ ಸುರಿಬೈಲ್ ಇವರು ಸಂಘಟನೆ ಬೆಳೆದುಬಂದ ಹಾದಿ ಖುರ್ಆನ್ ಆಯತಿನ ಮೂಲಕ ಸವಿಸ್ತಾರವಾಗಿ ಮನಮುಟ್ಟುವಂತೆ ಆಕರ್ಷಕ ಶೈಲಿಯಲ್ಲಿ ಪ್ರಭಾಷಣಗೈದರು.

ವರದಿ ಬಾಹಸನಿ ಉಳ್ತೂರ್

error: Content is protected !! Not allowed copy content from janadhvani.com