ರಿಯಾದ್: ಕಾರ್ಮಿಕ ಸಚಿವಾಲಯವು ವಿದೇಶಿ ಕಾರ್ಮಿಕರಿಗೆ ಏರ್ಪಡಿಸಿದ ಲೆವಿಯಲ್ಲಿ ವಿನಾಯ್ತಿ ನೀಡುವ ರಾಜರ ನಿರ್ಧಾರವು ಮೂರುವರೆ ಲಕ್ಷ ಖಾಸಗಿ ಸಂಸ್ಥೆಗಳಿಗೆ ವರದಾನವಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಅಲ್ಲಿನ ರಾಜ ಸಲ್ಮಾನ್ ಅವರು ನೀಡಿದ ಘೋಷಣೆಯ ಬಳಿಕ 2018 ರಲ್ಲಿ ವಿಧಿಸಲಾದ ಲೆವಿಯನ್ನು ಮರಳಿಪಡೆಯುವ ಅಥವಾ ವಿನಾಯಿತಿ ಲಭಿಸುವ ಸಂವಿಧಾನ ಏರ್ಪಡಿಸಲಾಗಿದೆ. ಭಾಗಶಃ ಕಟ್ಟಿದವರಿಗೆ ಮರಳಿಸಲಿದ್ದು, ಉಳಿದ ಮೊತ್ತಕ್ಕೆ ವಿನಾಯಿತಿ ಲಭಿಸಲಿದೆ. ಲೆವಿ ಪಾವತಿಸದ, ನಿತಾಖಾತ್ನಲ್ಲಿ ಹಳದಿ, ಕೆಂಪು ವರ್ಗದ ಸಂಸ್ಥೆಗಳಿಗೆಸಂಪೂರ್ಣ ವಿನಾಯಿತಿ ಲಭಿಸಲಿದೆ
12 ತಿಂಗಳ ಲೆವಿ ರಿಯಾಯಿತಿ ಲಭಿಸಿದ ಕಾರಣ ಇಂತಹ ಸಂಸ್ಥೆಗಳು ನ್ಯಾಯಸಮ್ಮತವಾಗಿ ಮಾರ್ಪಡಬಹುದು.
ಕಾರ್ಮಿಕ ಸಚಿವಾಲಯವು ಲೆವಿ ಮರಳಿ ಪಡೆಯುವುದಕ್ಕೆ ಬೇಕಾದ ಅರ್ಜಿ ಸಲ್ಲಿಸುವ ವಿಧಾನವನ್ನು ಸ್ಪಷ್ಟಪಡಿಸಿದೆ.ಕಾರ್ಮಿಕ ಸಚಿವಾಲಯದ ಅಡಿಯಲ್ಲಿರುವ ‘ಹಾಫಿಝ್’ನ ಮೂಲಕ ಮೊತ್ತವನ್ನು ಮರಳಿಸಲಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ವಿದೇಶಿ ನೌಕರರಿಗೆ ವಿಧಿಸಲಾದ ಲೆವಿಯಿಂದಾಗಿ ಯಾತನೆ ಅನುಭವಿಸುವ ಖಾಸಗಿ ಸಂಸ್ಥೆಗಳಿಗೆ ಸಲ್ಮಾನ್ ರಾಜರು ಕಳೆದ ಶನಿವಾರ ವಿಶೇಷ ಆರ್ಥಿಕ ನೆರವು ಘೋಷಿಸಿದ್ದರು.
2018ರಲ್ಲಿ ಪಾವತಿಸಿದ ಲೆವಿಗೆ ಬದಲಾಗಿ ಈ ನೆರವು ಲಭಿಸಲಿದೆ. ಖಾಸಗಿ ವಲಯವನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಭಾಗವಾಗಿ ಈ ನಡೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು