ಬೆಂಗಳೂರು: ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿರುವ ಎಸ್ಎಸ್ಎಫ್ (SSF) ಸಾಹಿತ್ಯೋತ್ಸವದ 14ನೇ ಆವೃತ್ತಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ‘ರಾಜ್ಯ ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ’ ಯನ್ನು ರಚಿಸಲಾಗಿದೆ. ಕಳೆದ 13 ಆವೃತ್ತಿಗಳ ಯಶಸ್ಸಿನ ಹಾದಿಯಲ್ಲಿ ಸಾಗಿಬಂದಿರುವ ಈ ಕಲಾ ಹಬ್ಬವು ಈ ಬಾರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ.
ಇತ್ತೀಚೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಅಲ್-ಹಿಕಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಹಿತ್ಯೋತ್ಸವದ ವಿವಿಧ ಹಂತಗಳು:
ಈ ಬಾರಿಯ ಸಾಹಿತ್ಯೋತ್ಸವವು ಕೆಳಕಂಡ ವೇಳಾಪಟ್ಟಿಯಂತೆ ಜರುಗಲಿದೆ:
- ಜೂನ್ 01 – ಜೂನ್ 10: ಫ್ಯಾಮಿಲಿ ಸಾಹಿತ್ಯೋತ್ಸವ
- ಜೂನ್ 11 – ಜೂನ್ 19: ಯುನಿಟ್ ಸಾಹಿತ್ಯೋತ್ಸವ
- ಜೂನ್ 20 – ಜುಲೈ 05: ಸೆಕ್ಟರ್ ಸಾಹಿತ್ಯೋತ್ಸವ
- ಜುಲೈ 06 – ಜುಲೈ 26: ಡಿವಿಷನ್ ಸಾಹಿತ್ಯೋತ್ಸವ
- ಜುಲೈ 27 – ಆಗಸ್ಟ್ 16: ಜಿಲ್ಲಾ ಸಾಹಿತ್ಯೋತ್ಸವ
- ಸೆಪ್ಟೆಂಬರ್ 05 ಮತ್ತು 06: ರಾಜ್ಯ ಮಟ್ಟದ ಮಹಾ ಸಾಹಿತ್ಯೋತ್ಸವ (ವಿಜಯನಗರ ಜಿಲ್ಲೆಯಲ್ಲಿ)
ರಾಜ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು:
ನೂತನ ಸಮಿತಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:
ಚೇರ್ಮನ್ | ಕೆ.ಕೆ. ಅಶ್ರಫ್ ಹಿಮಮಿ ಸಖಾಫಿ ದಾವಣಗೆರೆ
ಜನರಲ್ ಕನ್ವೀನರ್| ಉಬೈದುಲ್ಲಾ ಆರ್.ಜಿ.ನಗರ
ಫೈನಾನ್ಸ್ ಕಾರ್ಯದರ್ಶಿ| ಸಿನಾನ್ ಸಖಾಫಿ ಹಿಕಮಿ ವಿಜಯನಗರ
ಸಮಿತಿಯ ಸದಸ್ಯರು:
MSM ಜುನೈದ್ ಹಿಮಮಿ ಸಖಾಫಿ (ಚಿತ್ರದುರ್ಗ), ಶಿಹಾಬ್ ಮಡಿವಾಳ (ಬೆಂಗಳೂರು), ಎಂ.ಕೆ. ಇಬ್ರಾಹಿಂ ಮಜೂರು (ಉಡುಪಿ), ಅಕ್ತರ್ ಹುಸೇನ್ (ಬೆಂಗಳೂರು), ಸಾಲಿಮ್ ಮುಈನಿ ಸಖಾಫಿ ರಬ್ಬಾನಿ (ಗದಗ), ಅಲ್ತಾಫ್ ಮುಈನಿ ಹಂಡುಗುಳಿ (ಚಿಕ್ಕಮಗಳೂರು), ಹಮೀದ್ ತಲಪಾಡಿ (ದ.ಕ ವೆಸ್ಟ್), ರಶೀದ್ ಮಡಂತ್ಯಾರು (ದ.ಕ ಈಸ್ಟ್), ರಶೀದ್ ಸಅದಿ ಕಾಟಿಪಳ್ಳ, ಸಿದ್ದೀಕ್ ಬಜ್ಪೆ ಹಾಗೂ ಜಂಶಾದ್ (ದ.ಕ ಈಸ್ಟ್).
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿದರು. ಸಭೆಯಲ್ಲಿ ಸಿ.ಸಿ. ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು. ನೂತನ ಕನ್ವೀನರ್ ಉಬೈದುಲ್ಲಾ ಆರ್.ಜಿ. ನಗರ ವಂದನಾರ್ಪಣೆ ಮಾಡಿದರು ಎಂದು ರಾಜ್ಯ ಮೀಡಿಯಾ ವಿಭಾಗದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ರಾಜ್ಯ ಮಟ್ಟದ ಸಾಹಿತ್ಯೋತ್ಸವವು ಉತ್ತರ ಕರ್ನಾಟಕದ ಐತಿಹಾಸಿಕ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವುದು ವಿಶೇಷವಾಗಿದೆ.
















ಇನ್ನಷ್ಟು ಸುದ್ದಿಗಳು
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?
ಕೇರಳ ವಿಧಾನಸಭಾ ಚುನಾವಣೆ: 102 ಸ್ಥಾನಗಳಲ್ಲಿ UDF ಗೆ ಭರ್ಜರಿ ಜಯ- LDF ಗೆ ಹೀನಾಯ ಸೋಲು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ