ಬೆಂಗಳೂರು: ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿರುವ ಎಸ್ಎಸ್ಎಫ್ (SSF) ಸಾಹಿತ್ಯೋತ್ಸವದ 14ನೇ ಆವೃತ್ತಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ‘ರಾಜ್ಯ ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ’ ಯನ್ನು ರಚಿಸಲಾಗಿದೆ. ಕಳೆದ 13 ಆವೃತ್ತಿಗಳ ಯಶಸ್ಸಿನ ಹಾದಿಯಲ್ಲಿ ಸಾಗಿಬಂದಿರುವ ಈ ಕಲಾ ಹಬ್ಬವು ಈ ಬಾರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ.
ಇತ್ತೀಚೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಅಲ್-ಹಿಕಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಹಿತ್ಯೋತ್ಸವದ ವಿವಿಧ ಹಂತಗಳು:
ಈ ಬಾರಿಯ ಸಾಹಿತ್ಯೋತ್ಸವವು ಕೆಳಕಂಡ ವೇಳಾಪಟ್ಟಿಯಂತೆ ಜರುಗಲಿದೆ:
- ಜೂನ್ 01 – ಜೂನ್ 10: ಫ್ಯಾಮಿಲಿ ಸಾಹಿತ್ಯೋತ್ಸವ
- ಜೂನ್ 11 – ಜೂನ್ 19: ಯುನಿಟ್ ಸಾಹಿತ್ಯೋತ್ಸವ
- ಜೂನ್ 20 – ಜುಲೈ 05: ಸೆಕ್ಟರ್ ಸಾಹಿತ್ಯೋತ್ಸವ
- ಜುಲೈ 06 – ಜುಲೈ 26: ಡಿವಿಷನ್ ಸಾಹಿತ್ಯೋತ್ಸವ
- ಜುಲೈ 27 – ಆಗಸ್ಟ್ 16: ಜಿಲ್ಲಾ ಸಾಹಿತ್ಯೋತ್ಸವ
- ಸೆಪ್ಟೆಂಬರ್ 05 ಮತ್ತು 06: ರಾಜ್ಯ ಮಟ್ಟದ ಮಹಾ ಸಾಹಿತ್ಯೋತ್ಸವ (ವಿಜಯನಗರ ಜಿಲ್ಲೆಯಲ್ಲಿ)
ರಾಜ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು:
ನೂತನ ಸಮಿತಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:
ಚೇರ್ಮನ್ | ಕೆ.ಕೆ. ಅಶ್ರಫ್ ಹಿಮಮಿ ಸಖಾಫಿ ದಾವಣಗೆರೆ
ಜನರಲ್ ಕನ್ವೀನರ್| ಉಬೈದುಲ್ಲಾ ಆರ್.ಜಿ.ನಗರ
ಫೈನಾನ್ಸ್ ಕಾರ್ಯದರ್ಶಿ| ಸಿನಾನ್ ಸಖಾಫಿ ಹಿಕಮಿ ವಿಜಯನಗರ
ಸಮಿತಿಯ ಸದಸ್ಯರು:
MSM ಜುನೈದ್ ಹಿಮಮಿ ಸಖಾಫಿ (ಚಿತ್ರದುರ್ಗ), ಶಿಹಾಬ್ ಮಡಿವಾಳ (ಬೆಂಗಳೂರು), ಎಂ.ಕೆ. ಇಬ್ರಾಹಿಂ ಮಜೂರು (ಉಡುಪಿ), ಅಕ್ತರ್ ಹುಸೇನ್ (ಬೆಂಗಳೂರು), ಸಾಲಿಮ್ ಮುಈನಿ ಸಖಾಫಿ ರಬ್ಬಾನಿ (ಗದಗ), ಅಲ್ತಾಫ್ ಮುಈನಿ ಹಂಡುಗುಳಿ (ಚಿಕ್ಕಮಗಳೂರು), ಹಮೀದ್ ತಲಪಾಡಿ (ದ.ಕ ವೆಸ್ಟ್), ರಶೀದ್ ಮಡಂತ್ಯಾರು (ದ.ಕ ಈಸ್ಟ್), ರಶೀದ್ ಸಅದಿ ಕಾಟಿಪಳ್ಳ, ಸಿದ್ದೀಕ್ ಬಜ್ಪೆ ಹಾಗೂ ಜಂಶಾದ್ (ದ.ಕ ಈಸ್ಟ್).
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿದರು. ಸಭೆಯಲ್ಲಿ ಸಿ.ಸಿ. ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು. ನೂತನ ಕನ್ವೀನರ್ ಉಬೈದುಲ್ಲಾ ಆರ್.ಜಿ. ನಗರ ವಂದನಾರ್ಪಣೆ ಮಾಡಿದರು ಎಂದು ರಾಜ್ಯ ಮೀಡಿಯಾ ವಿಭಾಗದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ರಾಜ್ಯ ಮಟ್ಟದ ಸಾಹಿತ್ಯೋತ್ಸವವು ಉತ್ತರ ಕರ್ನಾಟಕದ ಐತಿಹಾಸಿಕ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವುದು ವಿಶೇಷವಾಗಿದೆ.

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ