ಮಂಗಳೂರು: ಇತ್ತೀಚೆಗೆ ಬಿಜೆಪಿ ನಾಯಕ ಬಸವನ ಗೌಡ ಪಾಟೀಲ್ ಯತ್ನಾಳ್ ಹಾವೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತುಂಬಾ ಭಾವನಾತ್ಮಕವಾಗಿ ಹೇಳಿಕೆ ನೀಡಿ ರಾಜ್ಯಕ್ಕೆ ಬುಲ್ಡೋಜರ್ ಬರಲಿದೆ ಆ ಸ್ಥಾನವನ್ನು ನಾನೇ ಅಲಂಕರಿಸಲಿದ್ದೇನೆ ಎಂದಿರುವುದಕ್ಕೆ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಈ ಮಾತಿನೊಂದಿಗೆ ಈ ದೇಶದ, ಒಂದು ನಿರ್ಧಿಷ್ಟ ಜನ ಸಮುದಾಯವನ್ನು ಉದ್ದೇಶಿಸಿ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ. ಈ ದೇಶದಲ್ಲಿ ಹುಟ್ಟಿ ಬೆಳದು ಈ ದೇಶದ ಮಣ್ಣಿಗೆ ಅಘಾದ ಕೊಡುಗೆ ನೀಡಿದ, ಒಂದು ಪರಿಗಣನಾತ್ಮಕ ಸಮುದಾಯವನ್ನು ತುಚ್ಛವಾಗಿ ಸಂಬೋಧಿಸಿದ್ದಾರೆ.
ಯತ್ನಾಳ್ ರಂತೆಯೇ ಇದಕ್ಕಿಂದ ಮೊದಲು ಅದೇ ಧಾಟಿಯಲ್ಲಿ ಮಾತನಾಡಿದ, ಸಂವಿಧಾನವನ್ನು ಬದಲಾಯಿಸುತ್ತೇವೆ, ಮತ್ತು ಒಂದು ನಿರ್ಧಿಷ್ಟ ಜನಸಮುದಾಯ ಮತ್ತು ಧರ್ಮವನ್ನು ಅವಹೇಳನ ಮಾಡಿದ ಯತ್ನಾಳ್ ರವರ ಸಮಕಾಲೀನ, ಕರ್ನಾಟಕದ ಉತ್ತರ ಕರಾವಳಿಯ ನಾಯಕರೊಬ್ಬರು ಇದೀಗ ಅನಿವಾರ್ಯ ಆಂಬುಲೆನ್ಸ್ ಸೇವೆಯನ್ನು ಅವಲಂಬಿಸಿರುವುದು ಖೇದಕರ.
ಅನ್ಯಧರ್ಮೀಯ ಮಹಿಳೆಯರ ಹಣೆಗೆ ತಿಲಕ ಇಡಲಿದ್ದೀವೆ,ಕರ್ನಾಟಕದ ಒಂದು ನಿರ್ಧಿಷ್ಟ ಧರ್ಮೀಯರ ಪ್ರತಿ ಮನೆಯಲ್ಲಿಯೂ ಮಹಿಳೆಯರ ಬುರ್ಕಾ ವಸ್ತ್ರ ಇರದಂತೆ ಮಾಡುತ್ತೇವೆ ಎಂದು ಬೊಬ್ಬಿರಿಸಿದ ಮಾತುಗಾರರ ಇತ್ತೀಚೆಗಿನ ಸ್ಥಿತಿ ಏನು ಎಂದು ಯತ್ನಾಳ್ ಅವರು ನೆನಪಿಡುವುದು ಉತ್ತಮ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ