janadhvani

Kannada Online News Paper

ಮಂಗಳೂರಿನಲ್ಲಿ ಅಕ್ಟೋಬರ್ 2 ರಂದು ‘ಇಲಲ್ ಹಬೀಬ್’ ಬೃಹತ್ ಮೀಲಾದ್ ರ‍್ಯಾಲಿ

ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಮಿನಿ ವಿಧಾನಸೌಧ ಮುಂದೆ ಸಮಾರೋಪಗೊಳ್ಳಲಿದೆ.

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ದ. ಕ ಜಿಲ್ಲೆ ವೆಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ ರವರ ಜನ್ಮ ದಿನಾಚರಣೆ ಅಂಗವಾಗಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಇಲಲ್ ಹಬೀಬ್ ಬೃಹತ್ ಮೀಲಾದ್ ರ‍್ಯಾಲಿಯು ಇದೇ ಬರುವ ಅಕ್ಟೋಬರ್ 2 ಸೋಮವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರಿನಲ್ಲಿ ನಡೆಯಲಿದೆ.

ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಮಿನಿ ವಿಧಾನಸೌಧ ಮುಂದೆ ಸಮಾರೋಪಗೊಳ್ಳಲಿದೆ.
ರ‍್ಯಾಲಿಗೆ ದ. ಕ ಜಿಲ್ಲೆ ವಕಫ್ ಬೋರ್ಡ್ ಅಧ್ಯಕ್ಷ ಬಿ. ಎ ನಾಸಿರ್ ಲಕ್ಕೀಸ್ಟಾರ್ ಜಾಥಾನಾಯಕರಿಗೆ
ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ರ‍್ಯಾಲಿಯಲ್ಲಿ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ಸುರತ್ಕಲ್, ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಮುಡಿಪು, ದೇರಳಕಟ್ಟೆ, ಉಳ್ಳಾಲ ಮುಂತಾದ ಏಳು ಝೋನ್ ಹಾಗೂ ಡಿವಿಷನ್ ಗಳ ನೇತೃತ್ವದಲ್ಲಿ ಪ್ರತ್ಯೇಕ ರೀತಿಯಲ್ಲಿ
ರ‍್ಯಾಲಿ ನಡೆಯಲಿದ್ದು ದಫ್, ಸ್ಕೌಟ್ ತಂಡಗಳು ಪಾಲ್ಗೊಳ್ಳಲಿದ್ದು ಅತ್ಯಂತ ಶಿಸ್ತು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ
ರ‍್ಯಾಲಿ ನಡೆಸಲಾಗುವುದು.

ಸಮಾರೋಪ ಸಮಾರಂಭದಲ್ಲಿ ದ. ಕ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ ಎಂ ಮುಮ್ತಾಝ್ ಅಲಿ ಅಧ್ಯಕ್ಷತೆ ವಹಿಸಲಿದ್ದು ಡಾ ಎಂ ಎಸ್ ಎಂ ಝೈನಿ ಕಾಮಿಲ್ ಮುಖ್ಯ ಭಾಷಣ ಮಾಡಲಿದ್ದಾರೆ.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ವಿ ಯು ಇಸಾಕ್ ಝುಹ್ರಿ, ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು, ಎಸ್ ಜೆ ಎಂ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಮದನಿ ಕೆಸಿರೋಡ್, ಎಸ್ ಎಂ ಎ ಜಿಲ್ಲಾ ಅಧ್ಯಕ್ಷ ಎ. ಪಿ ಇಸ್ಮಾಯಿಲ್ ಅಡ್ಯಾರ್
ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಮೇನೇಜ್ ಮೆಂಟ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆ ಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಇಲಲ್ ಹಬೀಬ್ ಮೀಲಾದ್ ಸಮಿತಿ ಚೇರ್ಮ್ಯಾನ್ ಹಾಫಿಳ್ ಯಾಕೂಬ್ ಸಅದಿ ನಾವೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಶ್ರಫ್ ಕಿನಾರ ಮಂಗಳೂರು
(ಪ್ರಧಾನ ಕಾರ್ಯದರ್ಶಿ
ಇಲಲ್ ಹಬೀಬ್ ಮೀಲಾದ್ ಸಮಿತಿ), ಅಬ್ದುಲ್ ರಹೀಂ ಸಅದಿ ಕತರ್ (ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ ಜಿಲ್ಲೆ), ಅಬ್ದುಲ್ ರಹಿಮಾನ್ ಪ್ರಿಂಟೆಕ್ (ಪ್ರಧಾನ ಕಾರ್ಯದರ್ಶಿ ಎಸ್ ವೈ ಎಸ್ ದ. ಕ ಜಿಲ್ಲೆ), ಇರ್ಷಾದ್ ಹಾಜಿ ಗೂಡಿನ ಬಳಿ (ಕೋಶಾಧಿಕಾರಿ ಎಸ್ಸೆಸ್ಸೆಫ್ ದಕ ಜಿಲ್ಲೆ), ಮುಹಮ್ಮದ್ ಅಝ್ಮಲ್ ಕಾವೂರು(ಕೋಶಾಧಿಕಾರಿ ಇಲಲ್ ಹಬೀಬ್ ಮೀಲಾದ್ ಸಮಿತಿ), ಶಾಕಿರ್ ಎಂಎಸ್ಸಿ ಬಜಪೆ
(ಮೀಡಿಯಾ ಕಾರ್ಯದರ್ಶಿ
ಇಲಲ್ ಹಬೀಬ್ ಮೀಲಾದ್ ಸಮಿತಿ) ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.