ಮಂಗಳೂರು: ಮರ್ಹೂಂ ಆತೂರು ಸಈದ್ ಮುಸ್ಲಿಯಾರ್ ರವರ ವ್ಯಕ್ತಿತ್ವವು ಮುಅಲ್ಲಿಂ ಸಮೂಹಕ್ಕೆ ಅತ್ಯಂತ ಮಾದರೀ ಯೋಗ್ಯವಾಗಿದೆ.
ಸಾವಿರಾರು ಮುಅಲ್ಲಿಮರಿಗೆ ಆದರ್ಶ ಪುರುಷರಾಗಿ ಮುಅಲ್ಲಿಮರ ನಡುವೆ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವಿಶೇಷ ಪ್ರೋತ್ಸಾಹ ಬೆಂಬಲ ನೀಡಿ ಬೆಳಸುವುದರಲ್ಲಿ ಅತ್ಯಂತ ಕಾಳಜಿ ವಹಿಸಿದ ಶ್ರೇಷ್ಠ ನಾಯಕರು ಎಂದು ಎಂಇಪಿ ಟ್ರೈನರ್ಸ್ ವಿಂಗ್ ಆಫ್ ಕರ್ನಾಟಕ ಇದರ ಚೆಯರ್ ಮ್ಯಾನ್ ಇಸ್ಮಾಯೀಲ್ ಸ-ಅದಿ ಉರುಮಣೆ ಹೇಳಿದರು.
ಕರ್ನಾಟಕ ರಾಜ್ಯ ಎಂಇಪಿ ಟ್ರೈನರ್ಸ್ ವಿಂಗ್ ಮೆಲ್ಕಾರ್ ಸುನ್ನೀ ಸೆಂಟರ್ ನಲ್ಲಿ ಆಯೋಜಿಸಿದ ಆತೂರು ಉಸ್ತಾದರ ಅನುಸ್ಮರಣಾ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮದ್ರಸ ರಂಗ ಮತ್ತು ಮುಅಲ್ಲಿಮರ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಕಂಡ ಕನಸು ನನಸು ಮಾಡಲು ಪ್ರತಿಯೊಬ್ಬ ಮುಅಲ್ಲಿಮರು ಬದ್ಧರಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಟ್ರೈನರ್ಸ್ ಗಳಾದ ಇಬ್ರಾಹೀಂ ನಈಮಿ ಉರುಮಣೆ,ಅಬೂಬಕರ್ ಲತೀಫಿ ಬೇಂಗಿಲ,ಸಿದ್ದೀಖ್ ಸಅದಿ ಮಿತ್ತೂರು,ಸಿದ್ದೀಖ್ ಮಿಸ್ಬಾಹಿ ಕರೋಪಾಡಿ,ಸಿನಾನ್ ಮದನಿ ಕಲ್ಲಡ್ಕ, ಮತ್ತು ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ಮೊದಲಾದವರು ಆತೂರು ಉಸ್ತಾದರ ವ್ಯಕ್ತಿತ್ವದ ಮತ್ತು ಅವರೊಂದಿಗೆ ಇದ್ದ ಒಡನಾಟದ ಮಧುರ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಉಸ್ತಾದರಿಗಾಗಿ ನಡೆಸಿದ ದ್ಸಿಕ್ರ್ ದುಆ ಕಾರ್ಯಕ್ರಮಕ್ಕೆ ರಫೀಖ್ ಸಅದಿ ಪೇರಿಮಾರ್ ನೇತೃತ್ವ ನೀಡಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ