ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ,ಆಕ್ರಮಣ,ನೈತಿಕ ಪೋಲಿಸ್ ಗಿರಿ ನಿರಂತರವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರ ಮೇಲೆ ದೌರ್ಜನ್ಯ, ಪೊಲೀಸ್ ಅಧಿಕಾರಿಗಳ ದರ್ಪ, ಕೋಮುವಾದಿಗಳ ಅಟ್ಟಹಾಸ ಮಿತಿ ಮೀರುತ್ತಿದೆ.
ನ್ಯಾಯ ನೀಡಬೇಕಾದ ಅಧಿಕಾರಿಗಳು ಇದರ ಕುರಿತು ಕಾಳಜಿ ವಹಿಸದೆ ಒಂದು ಸಮುದಾಯವನ್ನು ನ್ಯಾಯದ ವಿಷಯದಲ್ಲಿ ಕಡೆಗಣಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ.
ಈ ವಿಷಯವನ್ನು ಪ್ರತಿಪಾದಿಸಿ ನ್ಯಾಯಕ್ಕಾಗಿ ಸುನ್ನಿ ಸಂಘಟನೆಗಳ ವತಿಯಿಂದ ಹಕ್ಕೊತ್ತಾಯ ಮಾಡುವ ಬೃಹತ್ ಪ್ರತಿಭಟನೆ ನಾಳೆ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನಲ್ಲಿ ನಡೆಯುವಾಗ ನ್ಯಾಯ ಮತ್ತು ಶಾಂತಿಯನ್ನು ಬಯಸುವ ಎಲ್ಲರೂ ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು SYS ಮಂಗಳೂರು ಸೆಂಟರ್ ಅಧ್ಯಕ್ಷರಾದ ಕೆ.ಸಿ.ಎಣ್ಮೂರು ಹಾಗೂ ಪ್ರಧಾನ. ಕಾರ್ಯದರ್ಶಿ ಹಸನ್ ಪಾಡೇಶ್ವರ ಕರೆ ನೀಡಿದೆ.