ಶತ್ರುವಿನೊಂದಿಗೂ ಕರುಣೆ ತೋರಿ ಉದಾತ್ತ ಮಾದರಿಯನ್ನು ಮುಂದಿಟ್ಟ ಪ್ರವಾದಿ ಮುಹಮ್ಮದ್ (ಸ) ರವರ ನಡೆ-ನುಡಿಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಬದಲು
ತಮ್ಮ ಸಿದ್ಧಾಂತಗಳಿಗೆ ಧಾರ್ಮಿಕ ಲೇಪನ ಹಚ್ಚಿ ಸಮರ್ಥಿಸುವುದಕ್ಕಾಗಿ ಅವುಗಳನ್ನು ದುರ್ವ್ಯಾಖ್ಯಾನಗೊಳಿಸುವ ಪ್ರವೃತ್ತಿ ಖಂಡನೀಯ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ಖಡ್ಗವೆತ್ತಿದ್ದ ಶತ್ರುವೊಬ್ಬನು ನಿರಾಯುಧನಾದಾಗ
ಅವನ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ಪ್ರವಾದಿಗಳಿಗಿತ್ತು. ಆದರೆ ಅವರು ಅವನನ್ನು ಕ್ಷಮಿಸಿ ಕಳುಹಿಸಿಕೊಟ್ಟರು.
ಪ್ರವಾದಿಯವರ ಉದಾತ್ತ ಜೀವನ ಸಂದೇಶಕ್ಕೆ ಮಾದರಿಯಾದ ಈ ಘಟನೆಯನ್ನು ವಿಕಲವಾಗಿ ವ್ಯಾಖ್ಯಾನಿಸಿ ಪ್ರವಾದಿಗಳು ಪ್ರತೀಕಾರ ತೀರಿಸುವಂತೆ ಪಿ ಎಫ್ ಐ ಸಂಘಟನೆಯು ಕೇರಳದಲ್ಲಿ ನಡೆಸಿದ ಸಮ್ಮೇಳನ ಒಂದರಲ್ಲಿ ಭಾಷಣ ಮಾಡಲಾಗಿದೆ. ಇದು ಸ್ಪಷ್ಟವಾದ ಪ್ರವಾದಿ ನಿಂದನೆಯಾಗಿದ್ದು, ಇಸ್ಲಾಮಿನ ಬಗ್ಗೆ
ಕೋಮುವಾದ, ಭಯೋತ್ಪಾದನೆಗಳನ್ನು ಆರೋಪಿಸುತ್ತಿರುವ ಸಂಘಪರಿವಾರಕ್ಕೆ ಅವರ ವಾದಗಳನ್ನು ಮತ್ತಷ್ಟು ಹರಡಲು
ಇಂತಹ ಹೇಳಿಕೆಗಳು
ಸರಕಾಗುತ್ತಿದೆ.
ಇದು ಅಕ್ಷಮ್ಯವಾಗಿದ್ದು, ಇಂತಹ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಸಮಾಜವು ಜಾಗೃತವಾಗಿರಬೇಕು ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಎಂ ಕಾಮಿಲ್ ಸಖಾಫಿ ಕರೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ