ಈಶ್ವರಮಂಗಲ: ತ್ವೈಬಾ ಸೆಂಟರ್ ಈಶ್ವರಮಂಗಲ ಜಿಸಿಸಿ ಈದ್ ಸ್ನೇಹ ಸಂಗಮವು 31/07 /20 ರಂದು ಸಂಜೆ 5 ಗಂಟೆಗೆ ಆನ್ಲೈನ್ ಮೂಲಕ ನಡೆಯಿತು.ಬಹು ಹಂಝ ಮುಸ್ಲಿಯಾರ್ ರವರ ದುವಾದೊಂದಿಗೆ ಪ್ರಾರಂಭವಾದ ಸಭೆಯನ್ನು ಕೆಎಚ್ಚ್ ಮುಹಮ್ಮದ್ ಕುಂಞ್ಞಿ ಸಖಾಫಿ ಅಬುಧಾಬಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಮಾತನಾಡಿ ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿದವರಿಗೆ ಸಿಗುವ ಪ್ರತಿಫಲವನ್ನು ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತು ಕೋಯ ತಂಙಳ್ ಕಣ್ಣವಂ ರವರು ಸಂಸ್ಥೆಯ ಅನಿವಾರ್ಯತೆಯನ್ನು ಮನ ದಟ್ಟುವ ರೀತಿಯಲ್ಲಿ ವಿವರಿಸಿ ದುಆ ಆಶೀರ್ವಚನ ನೀಡಿದರು.
ಅಬ್ದುಲ್ ಅಝೀಝ್ ಮಿಸ್ಬಾಹಿ, ಕೆಎಚ್ಚ್ ಮುಹಮ್ಮದ್ ಕುಂಞ್ಞಿ ಫೈಝಿ,ಸಲಾಂ ಎಣ್ಮೂರ್, ತಾಜುದ್ದೀನ್, ಶರೀಫ್ ಜಿಕೆ, ಸುಹೈಲ್ ಮದನಿ, ಅಬೂಬಕರ್ ಕೆಜಿ, ಮಜೇದ್ ಬಿಲಾಲ್, ರಶೀದ್ ಬಿಲಾಲ್ ಭಾಷಣ ಮಾಡಿದರು.
ಯುಎಇ ರಾಷ್ಟ್ರೀಯ ಸಮಿತಿಗೆ ಈ ಕೆಳಗಿನಂತೆ ನೂತನ ಸಾರಥಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಕುಂಞ್ಞಿ ಸಖಾಫಿ, ಪ್ರಧಾನ ಕಾರ್ಯದರ್ಶಿ: ಸಹೈಲ್ ಮದನಿ, ಫೈನಾನ್ಶಿಯಲ್ ಸೆಕ್ರೆಟರಿ: ಆದಂ ಕುಂಞ್ಞಿ ಕೆ ಪಿ, ಓರ್ಗನೈಸಿಂಗ್ ಸೆಕ್ರೆಟರಿ ಎಂ ಎ ಮುಹಮ್ಮದ್ ಕುಂಞ್ಞಿ,
ಉಪಾಧ್ಯಕ್ಷರುಗಳು: ಅಬೂಬಕರ್ ಕಜೆ ಮತ್ತು ತಾಜುದ್ದೀನ್ ಎಬಿ, ಕಾರ್ಯದರ್ಶಿಗಳಾಗಿ: ಅಶ್ರಫ್ ಕೆಎಂ ಮತ್ತು ಉವೈಸ್ ಬಿಸಿ ಹಾಗೂ ಸದಸ್ಯರುಗಳಾಗಿ ರಶೀದ್ ಬಿಲಾಲ್ ಅಬ್ದುಲ್ ಲತೀಫ್ ಕನ್ನಡ್ಕ ಮತ್ತು ಹಬೀಬ್ ಕೆಪಿ ರವರನ್ನು ಆರಿಸಲಾಯಿತು.
ಎಂಎ ಮುಹಮ್ಮದ್ ಕುಂಞ್ಞಿ ಸ್ವಾಗತಿಸಿ ಸುಹೈಲ್ ಮದನಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ