ಆರಂಭದಲ್ಲೇ ಗುಜರಿ ಎಟಿಎಂ ತಂದು ಅಳವಡಿಸಿ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದ್ದ ಮಾಣಿಯ ಎಟಿಎಂ ಎರಡು ದಿನ ಸರಿ ಇದ್ದರೆ ಹದಿನೈದು ದಿನ ಕೆಟ್ಟಿರುತ್ತದೆ,ಮಾಣಿಯ ಬ್ಯಾಂಕ್ ನಲ್ಲಿ ಹಣ ಇದ್ದವರು ಹಣ ಬ್ಯಾಂಕ್ ಗೆ ಹಾಕಬಹುದು.
ಅಗತ್ಯ ಕ್ಕೆ ಬ್ಯಾಂಕ್ ನ ಗ್ರಾಹಕರು ಎ.ಟಿ.ಎಂ ಮೂಲಕ ಹಣವನ್ನು ತೆಗೆಯುವ ಹಾಗಿಲ್ಲ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಾಣಿಯ ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡ)ದ ಎ.ಟಿ.ಎಂ. ಹಾಳಾಗಿದೆ.ಈ ಅವ್ಯವಸ್ಥೆ ಬಗ್ಗೆ ಮಾಣಿ ಊರಿನಲ್ಲಿ ಯಾರೂ ಮಾತಾಡುತ್ತಿಲ್ಲ.
ಎ.ಟಿ.ಎಂ. ಯಂತ್ರ ವನ್ನು ದುರಸ್ತಿ ಗೆ ಮತ್ತು ತಾಂತ್ರಿಕ ಮಾರ್ಪಾಡಿಗೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗುತ್ತದೆ. ಒಂದು ಎ.ಟಿ.ಎಂ. ಯಂತ್ರ ದ ದುರಸ್ತಿ ಗೆ ಇಷ್ಟು ದಿವಸದ ಕಾಲಾವಕಾಶ ಬೇಕೇ ?ಎಂದು ಸಾರ್ವಜನಿಕರು ದೂರುತ್ತಾರೆ.
ಇನ್ನೂ ಕೆಲವು ಮಂದಿ
ಮಾಣಿಯಲ್ಲಿ ಎ.ಟಿ.ಎಂ ರದ್ದಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಅದು ಹೌದೇ ? ಅಥವಾ ಅಲ್ಲವೇ ಎಂಬ ಸ್ಪಷ್ಟನೆ ಮತ್ತು ಮಾಹಿತಿ ಸಂಬಂಧಪಟ್ಟವರು ನೀಡಿದರೆ ಸಾರ್ವಜನಿಕರಿಗೆ ಉಪಕಾರ ಆದೀತು. ಈಗಾಗಲೇ ಏ.ಟಿ.ಎಂ.ಕಾರ್ಡ್ ನ್ನು ಪಡೆದ ಮಾಣಿ ಶಾಖೆಯ ಬ್ಯಾಂಕ್ ಗ್ರಾಹಕರು ಹಣದ ಅಗತ್ಯ ಕ್ಕೆ ಏನು ಮಾಡಬೇಕೇಂದು ತೋಚುವುದಿಲ್ಲ ಎಂದು ಈ ಅವ್ಯವಸ್ಥೆ ಬಗ್ಗೆ ದೂರಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ಕಾರ್ಯಪ್ರವೃತ್ತರಾಗಲಿ.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್
ಸರಕಾರದ ಆದೇಶ, ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ- ಮುನೀರ್ ಕಾಟಿಪಳ್ಳ
ಮುಸ್ಲಿಮ್ ವರ್ತಕರ ಮೇಲೆ ಹಲ್ಲೆ: ಮುಸ್ಲಿಮ್ ಮುಖಂಡರ ಭೇಟಿ, ಗಂಭೀರ ಪರಿಗಣನೆ- ಕೆ.ಅಶ್ರಫ್