ಮನಾಮ: ಪವಿತ್ರ ಉಮ್ರಾ ಯಾತ್ರೆ ಮುಗಿಸಿ, ಜೀವನದ ಅತೀ ದೊಡ್ಡ ಅಭಿಲಾಷೆಯಾದ ಪುಣ್ಯ ಪ್ರವಾದಿ (ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ) ರವರ ರೌಳಾ ಷರೀಫ್ ಝಿಯಾರತ್ ನಡೆಸಿ ತಾಯ್ನಾಡಿಗೆ ಹಿಂತಿರುಗುವ ಮದ್ಯೆ ಆ ಮಹಾ ತಾಯಿ ಅಲ್ಲಾಹನ ಕರೆಗೆ ಓಗೊಟ್ಟರು. ಉಪ್ಪಿನಂಗಡಿ ಕೆಮ್ಮಾರದ ನಿವಾಸಿಯಾಗಿರುವ ಮರಿಯಮ್ಮ ಎಂಬವರು ಉಮ್ರಾ ಯಾತ್ರೆ ಮುಗಿಸಿ ಬಹ್ರೈನ್ ಮಾರ್ಗವಾಗಿ ಹಿಂತಿರುಗುವ ಮದ್ಯೆ ಬಹರೈನ್ ವಿಮಾನ ನಿಲ್ದಾಣದಲ್ಲಿ ದಿನಾಂಕ 13-01-2020 ರಂದು ಹೃಧಯಾಘಾತದಿಂದ ನಿಧನರಾಧರು.
ಏರ್ಪೋರ್ಟ್ ಅಧಿಕಾರಿಗಳು ಜನಾಝವನ್ನು ಕಿಂಗ್ ಹಮಾದ್ ಆಸ್ಪತ್ರೆಗೆ ಕಳುಹಿಸಿದರು. ವಿಷಯವನ್ನು ತಿಳಿದ ಕೆ.ಸಿ.ಎಫ್ ಬಹರೈನ್ ಅಧ್ಯಕ್ಷ ರಾದ ಜಮಾಲುದ್ದೀನ್ ವಿಟ್ಟಲ್ ನಿರ್ದೇಶನದಂತೆ ಸಾಂತ್ವನ ವಿಭಾಗದ ತಂಡವು ಕೂಡಲೇ ಆಸ್ಪತ್ರೆಗೆಭೇಟಿ ನೀಡಿ,ಮೃತರ ಕುಟುಂಬದವರನ್ನು ಸಾಂತ್ವನಗೈದು ಮುಂದಿನ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯಗೊಂಡ ತಂಡವು , ಜನಾಝವನ್ನು ಊರಿಗೆ ತಲುಪಿಸಲು ಭಾರತದ ರಾಯಭಾರಿ ಕಚೇರಿಯ, ಆಸ್ಪತ್ರೆಯ ಹಾಗೂ ಬಹರೈನ್ ಸರ್ಕಾರದಿಂದ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು 48 ಗಂಟೆಗಳ ಒಳಗಾಗಿ ಸಂಗ್ರಹಿಸುವಲ್ಲಿ ಸಫಲವಾಯಿತು.
ದಿನಾಂಕ 15-01-2020 ರಂದು ರಾತ್ರಿ ಬಹರೈನಿನಿಂದ ಹೊರಟು 16-01-2020 ರಂದು ಜನಾಝವು ಉಪ್ಪಿನಂಗಡಿ ಕೆಮ್ಮಾರದಲ್ಲಿ ಇರುವ ಅವರ ನಿವಾಸಕ್ಕೆ ತಲುಪಿತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ