ಮದೀನಾ ಮುನವ್ವರ: ಇಸ್ಮಾಯಿಲ್ ಸಅದಿ ಮಾಚಾರ್ ಅವರು ಬರೆದ ಖಸೀದತುಲ್ ಬುರ್ದಾ ಕನ್ನಡಾನುವಾದ ಭಾಗ 2 ಮದೀನಾ ಮುನವ್ವರದಲ್ಲಿ ಲೋಕಾರ್ಪಣೆಗೊಂಡಿತು.
ಅಲ್ ಖಾದಿಸೀಯ ಎಜುಕೇಶನ್ ಅಕಾಡಮಿ ಕಾವಳಕಟ್ಟೆ ಸಾರಥಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅವರು, ಪೇರೋಡ್ ಉಸ್ತಾದ್ ಅವರ ಪುತ್ರ ಮುಹಮ್ಮದ್ ಅಝ್ಹರಿಯವರಿಗೆ ಖಸೀದತುಲ್ ಬುರ್ದಾ ಪುಸ್ತಕ ನೀಡುವ ಮೂಲಕ ಬಿಡುಗೊಳಿಸಿದರು. ನಂತರ ಮಾತನಾಡಿದ ಹಝ್ರತ್ ಅವರು ಕಳೆದ ಬಾರಿ ಖಸೀದತುಲ್ ಬುರ್ದಾದ ಭಾಗ ಒಂದನ್ನು ಬಿಡುಗೊಳಿಸಿಲಾಗಿದ್ದು, ಈ ಬಾರಿ ಅದರ ಎರಡನೇ ಆವೃತ್ತಿ ಯನ್ನು ಬಿಡುಗಡೆಗೊಳಿಸಿ, ಸಂಪೂರ್ಣಗೊಳಿಸಿದ್ದಾರೆ ಎಂದು ಶುಭ ಹಾರೈಸಿದರು.

ಈ ವೇಳೆ ಇಸ್ಮಾಯಿಲ್ ಸಅದಿ ಮಾಚಾರ್ ಮಾತನಾಡಿ, ಖಸೀದತುಲ್ ಬುರ್ದಾ ಕನ್ನಡಾನುವಾದದ ಎರಡು ಭಾಗವು ಕೂಡ ಪವಿತ್ರ ಮದೀನಾದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಪುಸ್ತಕವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಇನ್ನಷ್ಟು ಪ್ರೀತಿಸಲು ಕಾರಣವಾಗಲಿ ಎಂದ ಅವರು, ಈ ಪುಸ್ತಕ ರಚನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಎಸ್.ವೈ.ಎಸ್ ದ.ಕ. ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟೋರಿ, ದಾರುಲ್ ಇರ್ಷಾದ್ ಮದೀನಾ ಎಜುಕೇಶನ್ ಮಾಣಿ ಇದರ ಮದೀನಾ ಘಟಕದ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು, ಅಬೂಬಕರ್ ಹಾಜಿ ರೈಸ್ಕೋ, ತಾಜುದ್ದೀನ್ ಸುಳ್ಯ, ನಝೀರ್ ಹಾಜಿ ದುಬೈ, ಅಲ್ ಹಾಜ್ ಸಲೀಂ ಮದನಿ, ಅಶ್ರಫ್ ಅಮ್ಜದಿ, ಝೈನುದ್ದೀನ್ ಪಕ್ಷಿಕೆರೆ, ಅಶ್ರಫ್ ಸಖಾಫಿ ನೂಜಿ, ಮತ್ತಿತರರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು