ಮದೀನಾ ಮುನವ್ವರ: ಇಸ್ಮಾಯಿಲ್ ಸಅದಿ ಮಾಚಾರ್ ಅವರು ಬರೆದ ಖಸೀದತುಲ್ ಬುರ್ದಾ ಕನ್ನಡಾನುವಾದ ಭಾಗ 2 ಮದೀನಾ ಮುನವ್ವರದಲ್ಲಿ ಲೋಕಾರ್ಪಣೆಗೊಂಡಿತು.
ಅಲ್ ಖಾದಿಸೀಯ ಎಜುಕೇಶನ್ ಅಕಾಡಮಿ ಕಾವಳಕಟ್ಟೆ ಸಾರಥಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅವರು, ಪೇರೋಡ್ ಉಸ್ತಾದ್ ಅವರ ಪುತ್ರ ಮುಹಮ್ಮದ್ ಅಝ್ಹರಿಯವರಿಗೆ ಖಸೀದತುಲ್ ಬುರ್ದಾ ಪುಸ್ತಕ ನೀಡುವ ಮೂಲಕ ಬಿಡುಗೊಳಿಸಿದರು. ನಂತರ ಮಾತನಾಡಿದ ಹಝ್ರತ್ ಅವರು ಕಳೆದ ಬಾರಿ ಖಸೀದತುಲ್ ಬುರ್ದಾದ ಭಾಗ ಒಂದನ್ನು ಬಿಡುಗೊಳಿಸಿಲಾಗಿದ್ದು, ಈ ಬಾರಿ ಅದರ ಎರಡನೇ ಆವೃತ್ತಿ ಯನ್ನು ಬಿಡುಗಡೆಗೊಳಿಸಿ, ಸಂಪೂರ್ಣಗೊಳಿಸಿದ್ದಾರೆ ಎಂದು ಶುಭ ಹಾರೈಸಿದರು.

ಈ ವೇಳೆ ಇಸ್ಮಾಯಿಲ್ ಸಅದಿ ಮಾಚಾರ್ ಮಾತನಾಡಿ, ಖಸೀದತುಲ್ ಬುರ್ದಾ ಕನ್ನಡಾನುವಾದದ ಎರಡು ಭಾಗವು ಕೂಡ ಪವಿತ್ರ ಮದೀನಾದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಪುಸ್ತಕವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಇನ್ನಷ್ಟು ಪ್ರೀತಿಸಲು ಕಾರಣವಾಗಲಿ ಎಂದ ಅವರು, ಈ ಪುಸ್ತಕ ರಚನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಎಸ್.ವೈ.ಎಸ್ ದ.ಕ. ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟೋರಿ, ದಾರುಲ್ ಇರ್ಷಾದ್ ಮದೀನಾ ಎಜುಕೇಶನ್ ಮಾಣಿ ಇದರ ಮದೀನಾ ಘಟಕದ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು, ಅಬೂಬಕರ್ ಹಾಜಿ ರೈಸ್ಕೋ, ತಾಜುದ್ದೀನ್ ಸುಳ್ಯ, ನಝೀರ್ ಹಾಜಿ ದುಬೈ, ಅಲ್ ಹಾಜ್ ಸಲೀಂ ಮದನಿ, ಅಶ್ರಫ್ ಅಮ್ಜದಿ, ಝೈನುದ್ದೀನ್ ಪಕ್ಷಿಕೆರೆ, ಅಶ್ರಫ್ ಸಖಾಫಿ ನೂಜಿ, ಮತ್ತಿತರರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ