ಮಕ್ಕಾ: ಈ ವರ್ಷದ ಪವಿತ್ರ ಹಜ್ಜ್ ಕರ್ಮ ನಿರ್ವಹಣೆಗಾಗಿ ಭಾರತದಿಂದ ಅಗಮಿಸಿದ್ದ ಹಜ್ಜಾಜಿಗಳ ಪ್ರಥಮ ತಂಡವನ್ನು ಕರ್ನಾಟಕ ಕಲ್ಚರಲ್ ಪೌಂಡೇಷನ್ (ಕೆ.ಸಿ.ಎಫ್) ಹಜ್ಜ್ ಸ್ವಯಂ ಸೇವಕರ ತಂಡ ಝಂ ಝಂ ನೀರು ,ಖರ್ಜೂರ ನೀಡಿ ಬಹಳ ಆತ್ಮೀಯವಾಗಿ ಬರಮಾಡಿಕೊಂಡು ಈ ವರ್ಷಧ ಹಜ್ಜ್ ಸೇವೆಗೆ ಚಾಲನೆ ನೀಡಿತ್ತು.
ಸುಮಾರು 6 ತಾಸುಗಳ ವಿಮಾನ ಯಾತ್ರೆಯಿಂದ ಆಯಾಸಗೊಂಡಿದ್ದ ಹಜ್ಜಾಜಿಗಳಿಗೆ ಗಂಜಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಲಗ್ಗೇಜ್ ಗಳನ್ನು ಆಯಾ ಹಾಜಿಗಳ ಕೂಠಡಿಗಳಿಗೆ ತಲುಪಿಸಿ ಕೊಡಲಾಗಿತ್ತು. ಪ್ರಥಮ ಉಮ್ರಾಕ್ಕೆ ನೇತೃತ್ವ, ಹಜ್ಜ್ ತರಗತಿ, ಅರೋಗ್ಯ ಪರೀಶಿಲನೆಗೆ ಸಹಕರಿಸಿದ HVC ತಂಡ, ಹರಮ್ ಪರಿಸರ, ಮಿನಾ, ಅರಫಾ, ಮುಝ್ದಲಿಫಾ, ಹೀಗೆ ಎಲ್ಲಾ ಕಡೆಗಳಲ್ಲಿಯೂ ವಿಷ್ವದ ವಿವಿದ ದಿಕ್ಕುಗಳಿಂದ ಆಗಮಿಸಿದ ಹಜ್ ಯಾತ್ರಿಕರಿಗೆ ಸುಮಾರು 40 ದಿವಸಗಳ ಕಾಲ ಎಲ್ಲಾ ರೀತಿಯ ಸೇವೆಯಲ್ಲಿ ನಿರತರಾಗಿ, ಅವರುಗಳ ಮನಸ್ಸನ್ನೇ ಗೆದ್ದು ಬಿಟ್ಟಿತು.

ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ನಿಸ್ವಾರ್ಥ ಸೇವೆಗೆ ಹಜ್ ಯಾತ್ರಿಕರು ಮನದಾಳದಿಂದ ಪ್ರಾರ್ಥಿಸುವುದರೊಂದಿಗೆ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ಈ ಸೇವೆಯು ಪ್ರತೀ ವರ್ಷ ಹಜ್ ನಿರ್ವಹಿಸಲು ಆಗಮಿಸುವವರಿಗೆ ದೊರೆಯುತ್ತಿರಲಿ ಎಂದು ಶುಭ ಹಾರೈಸಿದರು.
ಸ್ವಾಗತದೊಂದಿಗೆ ಪ್ರಾರಂಭವಾದ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ಈ ವರ್ಷದ ಸೇವೆಯು ಹಜ್ಜಾಜಿಗಳ ಬೀಳ್ಕೊಡುಗೆಯಲ್ಲಿ ಮುಕ್ತಾಯ…….
✍ಕಲಂದರ್ ಶಾಫೀ ಅಸೈಗೋಳಿ
(ಶಿಕ್ಷಣ ಇಲಾಖೆ ಕಾರ್ಯದರ್ಶಿ ಮಕ್ಕಾ ಸೆಕ್ಟರ್)















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ