ಚಿಕ್ಕಮಗಳೂರು : ಅಮಾಯಕ ರವೂಫ್ ರವರ ಹಿನ್ನಲೆ ತಿಳಿಯದೆ ಮಾಧ್ಯಮಗಳು ಪೂರ್ವಾಗ್ರಹ ಪೀಡಿತರಾಗಿ ವರದಿ ಬಿತ್ತರಿಸಿರುವುದು ಖಂಡನೀಯವಾಗಿದೆ. NIA ಸಂಸ್ಥೆಯು ಯಾವುದೇ ತನಿಖೆ ನಡೆಸದೆ ಮಾಧ್ಯಮಗಳು ಅವರನ್ನು ಅದ್ಹೇಗೆ ಭಯೋತ್ಪಾದಕ ಅಂತ ಚಿತ್ರೀಕರಿಸಿತು. ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸ ಅದಿಯವರು ಪ್ರಶ್ನಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿಯ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಬಂದಿದ್ದ ಅವರು ಮಾಧ್ಯಮಗಳು ಸಮಾಜದ ಬೆಳಕಾಗಿ ಗುರುತಿಸಿಕೊಳ್ಳಬೇಕಾದಂತದ್ದು, ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆಯುವ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವಾಗ ಮಾಧ್ಯಮ ಭಯೋತ್ಪಾದನೆ ಎಂದು ಕರೆದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ” ಲವ್ ಜಿಹಾದ್” ಎನ್ನುವುದು ಕೂಡ ಮಾಧ್ಯಮಗಳ ಸೃಷ್ಟಿಯಾಗಿತ್ತು.
ಲವ್ ಹಾಗೂ ಜಿಹಾದ್ ಇವೆರಡೂ ಬೇರೆ ಬೇರೆಯಾಗಿದೆ, ಇಸ್ಲಾಂ ಪ್ರೀತಿಯನ್ನು ಕಲಿಸಿಕೊಡುತ್ತದೆ ಆದರೆ ಮಾಧ್ಯಮಗಳು ಬಿತ್ತರಿಸುತ್ತಿರುವಂತಹ ಲವ್ ಜಿಹಾದ್ ಬೇರೆಯಾಗಿದೆ. ಇಸ್ಲಾಂ ಕೂಡ ಅದನ್ನು ಅನುಮತಿಸುವುದಿಲ್ಲ. ಲವ್ ಅನ್ನುವ ಪದಕ್ಕೆ ಶ್ರೇಷ್ಠವಾದ ಜಿಹಾದ್ ಅನ್ನುವುದನ್ನು ಸೇರಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪರಿಶ್ರಮಿಸಿದ ಮಾಧ್ಯಮಗಳ ಷಡ್ಯಂತ್ರಗಳಾಗಿವೆ ಇವೆಲ್ಲವೂ.
ರವೂಫ್ ರವರ ಹಿನ್ನಲೆಗಳನ್ನು ಹತ್ತಿರದಿಂದ ಬಲ್ಲವರಾಗಿರುವ ಕಾರಣಗಳಿಂದ ಇದು ಗೊತ್ತಾಯಿತು. ದೇಶದಲ್ಲಿ ನಿರಂತರವಾಗಿ ಭಯೋತ್ಪಾದನೆಯ ಹೆಸರಿನಲ್ಲಿ ಬಂಧಿಸಲ್ಪಟ್ಟ ಯುವಕರೂ ಇದೇ ರೀತಿಯ ಷಡ್ಯಂತ್ರಗಳಿಗೆ ಬಲಿಪಶು ಆಗಿರಬಹುದೆನ್ನುವ ಸಂಶಯ ಕಾಡುತ್ತಿದೆ ಎಂದು ಹೇಳಿದರು.
ರವೂಫ್ ರವರ ಕುರಿತು ಆಧಾರ ರಹಿತ ಆರೋಪಗಳನ್ನು ಹೊರಿಸಿ ವರದಿ ಬಿತ್ತರಿಸಿದ ಮಾಧ್ಯಮಗಳು ಕರ್ನಾಟಕ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಶಾಫಿ ಸಅದಿ ಯವರು, ಅಮಾಯಕರ ವಿರುದ್ಧ ನಡೆಯುವ ಷಡ್ಯಂತ್ರಗಳು ಕೊನೆಯಾಗಬೇಕೆಂದು ಹೇಳಿದರು.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್