ಕಾಸರಗೋಡು: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜೂಬಿಲಿ ಇದೇ ಬರುವ ಡಿಸೆಂಬರ್ 27,28,29 ದಿನಾಂಕಗಳಲ್ಲಿ ದೇಳಿ ಕಾಸರಗೋಡಿನಲ್ಲಿ ನಡೆಯಲಿದ್ದು ಈ ಪ್ರಯುಕ್ತ ಇಂದು ಸಅದಿಯ್ಯಾದಲ್ಲಿ ಕರ್ನಾಟಕ ಲೀಡರ್ಸ್ ಅಸ್ಸೆಂಬ್ಲಿ ನಡೆಯಿತು.
ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ಅಸೆಂಬ್ಲಿಯನ್ನು ಉದ್ಘಾಟಿಸಿದರು. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಅದಿಯ್ಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುವಾ ನೇರವೇರಿಸಿದರು. ಸಭೆಯಲ್ಲಿ ಸಅದಿಯ್ಯ ಮುಖ್ಯಸ್ಥರಾದ ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಚರ್ಚೆಗೆ ನೇತೃತ್ವ ನೀಡಿದರು.
ಮುಹಮ್ಮದಲಿ ಸಖಾಫಿ ತೃಕರಿಪೂರ್ ವಿಷಯ ಮಂಡಿಸಿದರು.

ಅಸೆಂಬ್ಲಿಯಲ್ಲಿ ಕೆ ಪಿ ಹುಸೈನ್ ಸಅದಿ ಕೆಸಿರೋಡ್
ಬಿ ಎಸ್ ಅಬ್ದುಲ್ಲ ಕುಞಿ ಫೈಝಿ, ಜಂಇಯ್ಯತುಲ್ ಉಲಮಾ ಮುಖಂಡರಾದ ಹೈದರ್ ಮುಸ್ಲಿಯಾರ್ ಕರಾಯ, ಖಾಸಿಂ ಮುಸ್ಲಿಯಾರ್, ಯುಕೆ ಮುಹಮ್ಮದ್ ಸಅದಿ ವಳವೂರು, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಮೌಲಾನಾ ಜಿ ಎಂ ಮುಹಮ್ಮದ್ ಸಖಾಫಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಹಫೀಳ್ ಸಅದಿ ಕೊಡಗು ಅಬ್ದುಲ್ ಹಕೀಂ ಸಕಲೇಶಪುರ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ರಾಜ್ಯ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ಸಕಲೇಶಪುರ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಹುಸೈನ್ ಸಅದಿ ಹೊಸ್ಮಾರ್ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಸಖಾಫಿ ಪುಂಡೂರು ಇಸ್ಮಾಯಿಲ್ ಸಅದಿ ಉರುಮಣೆ,ಹಾಫಿಳ್ ಹನೀಫ್ ಮಿಸ್ಬಾಹಿ ,ಅಶ್ರಫ್ ಕಿನಾರ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು,ಹಸೈನಾರ್ ಆನೆಮಹಲ್, ಅಡ್ವಕೇಟ್ ಶಾಕಿರ್ ಮಿತ್ತೂರು, ಇಕ್ಬಾಲ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು .ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿ ಕೊಲ್ಲಂಪಾಡಿ ಅಬ್ದುಲ್ ಖಾದರ್ ಸಅದಿ ವಂದಿಸಿದರು.






