ಉಡುಪಿ: ಎಸ್ಸೆಸ್ಸೆಫ್ ಉಡುಪಿ ಇದರ 2019 ರ ಅರ್ಧವಾರ್ಷಿಕ ಕೌನ್ಸಿಲ್ ಸಭೆಯು ದಿನಾಂಕ 27/7/19 ರಂದು ದಾರುಸ್ಸಲಾಂ ಮದ್ರಸ ಹಾಲ್ ಹೂಡೆ ಇಲ್ಲಿ, ಡಿವಿಷನ್ ಅಧ್ಯಕ್ಷರಾದ ಸೈಯದ್ ಯೂಸುಪ್ ತಂಘಲ್ ಹೂಡೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮೇಲ್ಗಟಕದ ವೀಕ್ಷಕರಾಗಿ ಉಡುಪಿ ಜಿಲ್ಲಾ ನಾಯಕರಾದ ಹನೀಪ್ ನಯೀಮಿ ಬೈಂದೂರ್ ಉಪಸ್ಥಿತಿಯಲ್ಲಿ, ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಉಡುಪಿ ಇವರು ಮುಖ್ಯ ತರಗತಿ ನಡೆಸಿಕೊಟ್ಟರು. ಡಿವಿಷನ್ ಗೌರವ ಸಲಹೆಗಾರ ರಶೀದ್ ಉಸ್ತಾದ್ ಕಟಪಾಡಿ ದುವಾ ಮಾಡಿದರು, ಡಿವಿಷನ್ ಗೌರವ ಸಲಹೆಗಾರ ರಝಾಕ್ ಉಸ್ತಾದ್ ಅಂಬಾಗಿಲು ಉದ್ಘಾಟಿಸಿದರು. ಡಿವಿಷನ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಅರ್ಧ ವಾರ್ಷಿಕ ವರದಿ ವಾಚಿಸಿದರು.ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ ಲೆಕ್ಕಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ ಡಿವಿಷನ್ ಗೌರವ ಸಲಹೆಗಾರರಾದ ಸುಬುಹಾನ್ ಹೊನ್ನಾಳ, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಕ್ಯಾಂಪಸ್ ಕಾರ್ಯದರ್ಶಿ ಫಾರೂಕ್ ಪಿ.ಕೆ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದಿನ್ ರಂಗನಕೆರೆ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಶಾಹುಲ್ ದೊಡ್ಡಣಗುಡ್ಡೆ ಹಾಗು ಇನ್ನಿತರ ಸದಸ್ಯರು, ಕೌನ್ಸಿಲರ್ ಉಪಸ್ಥಿತಿ ಇದ್ದರು. ಡಿವಿಷನ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ವಂದಿಸಿದರು. ವರದಿ:ಪಿ ಎಂ ಎಸ್ ಪಡುಬಿದ್ರಿ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ