janadhvani

Kannada Online News Paper

SSF ಟಿಪ್ಪುನಗರ ಶಾಖೆ: ಈದ್ ಸಡಗರದೊಂದಿಗೆ ವಿಶ್ವ ಪರಿಸರ ದಿನಾಚರಣೆ

ವಿಟ್ಲ, ಜೂನ್.5: ವಿಶ್ವ ಪರಿಸರ ದಿನದ ಅಂಗವಾಗಿ ಈದ್ ನ ಸಡಗರದೊಂದಿಗೆ ಕೊಡಂಗಾಯಿ ಟಿಪ್ಪು ನಗರದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಕ್ಯಾಂಪಸ್ಸಿನಲ್ಲಿ ಸಸಿಗಳನ್ನು ನೆಡುವ ಮೂಲಕ SSF ಟಿಪ್ಪುನಗರ ಶಾಖೆ ವತಿಯಿಂದ ಈದುಲ್ ಫಿತ್ರ್ನನು ವಿಶಿಷ್ಟವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷರಾದ ಶ್ಯೆಖುನಾ ಪಿ.ಕೆ.ಅಬೂಬಕ್ಕರ್ ಮುಸ್ಲಿಯಾರ್, ದಾರುನ್ನಜಾತ್ ಮುದರ್ರಿಸ್ ಅಬೂಬಕ್ಕರ್ ಸಖಾಫಿ ಕಲ್ಮಿಂಜ, ಮುಅಲ್ಲಿಂ ಹಾಫಿಳ್ ಶರೀಫ್ ಮುಸ್ಲಿಯಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಹಮೀದ್ ಕೊಡಂಗಾಯಿ, SMA ವಿಟ್ಲ ರೀಜ್ಯನಲ್ ಅಧ್ಯಕ್ಷರಾದ ಉಸ್ಮಾನ್ ಹಾಜಿ, ಎಸ್ಸೆಸ್ಸೆಫ್ ಟಿಪ್ಪುನಗರ ಶಾಖಾ ನಾಯಕರಾದ ಅಬ್ದುಲ್ ಲತೀಫ್, ಅಹ್ಮದ್ ಸಿನಾನ್ ಸಖಾಫಿ, ಶರೀಫ್ ಮದನಿ ಎಸ್ಸೆಸ್ಸೆಫ್ ಮೆಜೆಸ್ಟಿಕ್ ಡಿವಿಷನ್ ನಾಯಕ ಡಿ.ಎ ಅಶ್ರಫ್ ಬೆಂಗಳೂರು, ವಿಟ್ಲ ಡಿವಿಷನ್ ಕಾರ್ಯದರ್ಶಿ ಅಶ್ಫಾಕ್ ಕೊಡಂಗಾಯಿ, ಎಸ್.ವೈ.ಎಸ್ ನಾಯಕರಾದ ಇಬ್ರಾಹಿಂ ಮೋನು, ರಝಾಕ್ ರಾಧುಕಟ್ಟೆ, ಅಬ್ದುಲ್ ಬಶೀರ್ ಮುಳ್ಳಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ