janadhvani

Kannada Online News Paper

ಎಸ್.ಎಸ್.ಎಫ್ ಸುಳ್ಯ ಡಿವಿಷನ್; ಮುಸ್ಹಫ್ ವಿತರಣೆ

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ವತಿಯಿಂದ ತಾಲೂಕಿನ ವಿವಿಧ ಸ್ಥಳಗಳಿಗೆ ಮುಸ್ಹಫ್ ವಿತರಿಸಲಾಯಿತು. ಗಾಂಧಿನಗರ ಸುನ್ನೀ ಸೆಂಟರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಕೆ ಇಬ್ರಾಹಿಂ ಅಮ್ಜದಿರವರು ಅಧ್ಯಕ್ಷತೆ ವಹಿಸಿದರು. ಸಂಘಟನೆಯ ವಿವಿಧ ಯೋಜನೆಗಳಿಗೆ ಸಹಕಾರ ನೀಡಿದವರಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು.

ಜಾಲ್ಸೂರು ಸೆಕ್ಟರ್ ಅಧ್ಯಕ್ಷ ಉನೈಸ್ ಸಖಾಫಿ ಮೇನಾಲ, ಹಬೀಬ್ ಕೆ.ಬಿ ಬೆಂಗಳೂರು ಶುಭ ಹಾರೈಸಿದರು. ಡಿವಿಷನ್ ಉಪಾಧ್ಯಕ್ಷ ಸಿದ್ದೀಕ್ ಗೂನಡ್ಕ, ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ನಾಸಿರ್ ಬಾ ಹಸನಿ, ಎಸ್.ವೈ.ಎಸ್ ಪ್ರಮುಖರಾದ ಸಿದ್ದೀಕ್ ಕಟ್ಟೆಕ್ಕಾರ್ಸ್, ಗಾಂಧಿನಗರ ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ, ಕಬೀರ್ ಮೇನಾಲ, ರಿಯಾಝ್ ಪಂಡಿತ್ ಮುಂತಾದವರು ಉಪಸ್ಥಿತರಿದ್ದರು.