ಎಸ್ಸೆಸ್ಸೆಫ್ ತೌಡುಗೊಳಿ ಶಾಖೆ ವತಿಯಿಂದ ಇಫ್ತಾರ್ ಸಂಗಮವು ದಿನಾಂಕ 22 -05 -2019 ರಂದು ಬದ್ರಿಯಾ ಜುಮಾ ಮಸ್ಜಿದ್ ತೌಡುಗೊಳಿ ಸಭಾಂಗನದಲ್ಲಿ ನಡೆಯಿತು. ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್ ತೌಡುಗೊಳಿ ಕತೀಬರಾದ ಅಬ್ದುಲ್ ಹಮೀದ್ ಸಖಾಫಿ ಉಸ್ತಾದರ ದುಆದೊಂದಿಗೆ ಆರಂಭಗೊಂಡಿತು.ತದ ನಂತರ ಬದ್ರ್ ಮೌಲೂದ್ ಪಠಿಸಿ ಜುಮಾ ಮಸ್ಜಿದ್ ಖತೀಬರಾದ ಅಬ್ದುಲ್ ಹಮೀದ್ ಸಖಾಫಿ ಉಸ್ತಾದರು ಬದರ್ ದಿನದ ಮಹತ್ವವನ್ನು ವಿವರಿಸಿದರು.
ನಂತರ ಇಫ್ತಾರ್ ಕೂಟ ನಡಯಿತು.
ಕಾರ್ಯಕ್ರಮದಲ್ಲಿ ತೌಡುಗೊಳಿ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಟಿ. ಎಚ್, ಕಾರ್ಯದರ್ಶಿ ಶೇಕ್ಅಬ್ದುಲ ಬರೆಬಾಯಿ, ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಅಧ್ಯಕ್ಷರಾದ ಫಾರೂಕ್ ಸುನ್ನಂಗಳ, ಯೆಸ್.ವೈ.ಎಸ್ ಕಾರ್ಯದರ್ಶಿ ಹೈದರ್ ಮುಸ್ಲಿಯಾರ್, ಯೆಸ್.ವೈ.ಎಸ್ ತೌಡುಗೊಳಿ ಶಾಖಾ ಸದಸ್ಯರಾದ ಅಬ್ಬಾಸ್ ಸುನ್ನಂಗಳ, ಹಮೀದ್ ತೌಡುಗೊಳಿ ಸ್ಟಾರ್ ಆಟ್ಸ್&ಸ್ಪೋಟ್ಸ್ ತೊಡುಗೊಳಿ ಇದರ ಕಾರ್ಯದರ್ಶಿ ಸಿಹಾಬುದ್ದೀನ್ ತೌಡುಗೊಳಿ,
ಅಲ್ ಅಮಾನ್ ಜಿ.ಸಿ.ಸಿ ಸದಸ್ಯರಾದ ಹನೀಫ್ ತೌಡುಗೊಳಿ,ಇಬ್ರಾಹಿಂ , ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಸದಸ್ಯರಾದ ಮೊಯ್ದೀನ್ ಕುಂಞಿ ಬಲಪು,ಮುಸ್ತಫಾ ತೌಡುಗೊಳಿ, ಸಿದಿಕ್ ಬವಲಗುರಿ ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಮಸೂದ್ ಬಾಹ್ಶನಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಗಣ್ಯರಿಗೆ ಧನ್ಯವಾದವಿತ್ತರು. ಕೊನೆಯಲ್ಲಿ ಭೋಜನ ಕೂಟದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ