ಕುವೈತ್ ಸಿಟಿ: ಗಲ್ಫ್ ವಲಯವು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಾ ಸಾಗುತ್ತಿದೆ ಎಂದು ಕುವೈತ್ ಅಮೀರ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಯತಂತ್ರ ಪ್ರತಿನಿಧಿಗಳಿಗೆ ಈ ಸನ್ನಿವೇಶದಲ್ಲಿ ದುಪ್ಪಟ್ಟು ಜವಾಬ್ದಾರಿ ಇದ್ದು, ಸಮಾಧಾನಕರ ವಾತಾವರಣವನ್ನು ಮರಳಿಪಡೆಯಲೇ ಬೇಕಿದೆ ಎಂದವರು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದಲ್ಲಿ ಹಮ್ಮಿಕೊಂಡ ರಮಝಾನ್ ಸಂದರ್ಶನ ವೇಳೆ ಅಮೀರ್ ಶೈಖ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸ್ವಬಾಹ್ ಈ ಬಗ್ಗೆ ಮಾತನಾಡುತ್ತಿದ್ದರು. ದೇಶದ ಹಿತವನ್ನು ಮುಂದಿರಿಸಿ ಕಾರ್ಯಾಚರಿಸಬೇಕೆಂದು ಅವರು ವಿದೇಶಾಂಗ ಸಚಿವಾಲಯದ ಸಿಬ್ಬಂದಿಗೆ ತಿಳಿಸಿದ್ದು, ವಲಯದಲ್ಲಿ ಸಮಾಧಾನಕರ ಸನ್ನಿವೇಶವನ್ನು ಮರಳಿಪಡೆಯುವುದು ಸಾಧ್ಯ ಎನ್ನುವ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯತಂತ್ರ ರಂಗದಲ್ಲಿನ ಕುವೈತ್ ನ ಕಾರ್ಯವೈಖರಿಯನ್ನು ವಿಶ್ವವು ಅಂಗೀಕರಿಸಿದೆ. ಯಾವುದೇ ಪಕ್ಷ ಸೇರದೆ ಶಾಂತಿಗಾಗಿ ನೆಲೆ ನಿಲ್ಲುವುದು ದೇಶದ ನಿಲುವಾಗಿದೆ ಎಂದು ಅಮೀರ್ ವ್ಯಕ್ತಪಡಿಸಿದರು.
ಯುವರಾಜ ನವಾಫ್ ಅಲ್ ಅಹ್ಮದ್ ಅಲ್ ಸ್ವಾಬಾಹ್ ಜೊತೆಗಿದ್ದರು. ವಿದೇಶಾಂಗ ಸಚಿವ ಶೈಖ್ ಸಬಾಹ್ ಖಾಲಿದ್ ಅಲ್ ಹಮದ್ ಅಸ್ಸಬಾಹ್ ಅಮೀರ್ ಮತ್ತು ಯುವರಾಜರನ್ನು ಬರಮಾಡಿಕೊಂಡರು. ನ್ಯಾಷನಲ್ ಗಾರ್ಡ್ ಉಪ ಅಧಿಕಾರಿ ಶೈಖ್ ಮಿಶ್ಅಲ್ ಅಲ್ ಅಹ್ಮದ್ ಅಸ್ಸಬಾಹ್, ಪ್ರಧಾನಮಂತ್ರಿ ಶೈಖ್ ಜಾಬಿರ್ ಮುಬಾರಕ್ ಅಲ್ ಹಮದ್ ಅಸ್ಸಬಾಹ್ ಮುಂತಾವರು ಅಮೀರರನ್ನು ಅನುಗಮಿಸಿದ್ದರು. ಸಭೆಯಲ್ಲಿ ಸ್ಪೀಕರ್ ಮರ್ಝೂಖ್ ಅಲ್ ಗ್ವಾನಿಮ್ ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ